Sunday, June 27, 2021

ವಾರಾನ್ನ

 

                                     ವಾರಾನ್ನ

ಸ್ಕೊಲ್ ನಿಂದ ಬಂದ ಸಾನ್ವಿ ಒಂದೆ ಸಮನೆ ಅಮ್ಮನ ಹತ್ತಿರ ರಗಳೆ ಶುರು ಮಾಡಿದಳು. “ಏನಮ್ಮಾ,  ಇವತ್ತಾದ್ರು  ಪಾವ್ ಭಾಜಿ ಮಾಡ್ತಿಯಾ ಅಂದ್ಕೊಂಡಿದ್ದೆ. ಆದ್ರೆ ನೀನು ಸುಮ್ನೆ ಬ್ರೆಡ್ ಬೇಯಿಸಿದ್ದಿಯಾ. ನನಗೆ ಇವತ್ತು ಏನಾದ್ರು ಡಿಫರೆಂಟ್ ಆಗಿರೋದು ತಿನ್ನಬೇಕು  ಅಂತ ಆಸೆ ಆಗ್ತಾ ಇದೆ” ಅಂತ ಒಂದೆ ಸಮನೆ  ಸಾನ್ವಿ ಅಮ್ಮನ ಹತ್ತಿರ ರಗಳೆ ತೆಗೆದಳು. ಸಾನ್ವಿ ಅಮ್ಮ ಸರೋಜ ಮಗಳಿಗೆ ತಾನು ಶಾಲೆಯಿಂದ ಸುಸ್ತಾಗಿ ಬಂದಿದ್ದಿನಿ. ಅಲ್ಲದೆ ತನಗು ಒಂದೆ ಸಮನೆ ಒಂದಾದ ಮೇಲೆ ಒಂದು ತರಗತಿ ಹಾಗು ಅಲ್ಲಿ ಮಕ್ಕಳ ಹತ್ತಿರ ಕೂಗಿ ಸುಸ್ತಾಗಿರೋದನ್ನು ಸಾನ್ವಿಗೆ ತಿಳಿಸಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಇದೆಲ್ಲಾ ಅರ್ಥ ಆಗದೆ ಇರೋ ವಯಸ್ಸೆನಲ್ಲ ಸಾನ್ವಿದು. ಆದರೆ ಸಾನ್ವಿ  ಬೆಳೆದ ವಾತಾವರಣ ಅವಳಿಗೆ ಬೆರೆಯವರ ಕಷ್ಟದ ಅರಿವು ಇಲ್ಲದಂತೆ ಮಾಡಿತ್ತು. ಇದು ಸಾನ್ವಿಯ ತಪ್ಪು ಅನ್ನುವುದಕಿಂತ ಅವಳ ಬೆಳೆದ ಮತ್ತು ಬೆಳೆಸಿದವರ ಪಾತ್ರವೆ ಜಾಸ್ತಿ ಇತ್ತು.

ಸರೋಜ ಮತ್ತು ಶ್ರೀದರ ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸ ಮುಗಿಸಿದವರು. ತಾವು ಕಷ್ಟ ಪಟ್ಟಂತೆ ತಮ್ಮ ಮಗಳು ಕಷ್ಟ ಪಡುವುದು ಬೇಡ ಎಂದು ಮೊದಲಿನಿಂದಲು ಸ್ವಲ್ಪ ಮುದ್ದಾಗಿ ಬೆಳೆಸಿದರು. ಆದರೆ ಈ ನಡುವೆ ಮನೆಯಿಂದಲೆ ಕೆಲಸ ಮಾಡುವ ಕಾರಣ ಶ್ರೀದರನಿಗೆ ಮಗಳ ನಡುವಳಿಕೆ ಸ್ವಲ್ಪ ಕಿರಿಕಿರಿ ಉಂಟು ಮಾಡಿತ್ತು. ತಾವೆ ಎಲ್ಲೊ ಎಡವಿದೆವು ಅಂತ ಅನ್ನಿಸಲು ಶುರುವಾಯಿತು. ಹಾಗೆ ಯೋಚನೆಯಲ್ಲಿ ಮುಳುಗಿದ ಶ್ರೀದರನಿಗೆ ತನ್ನ ಹಳೆಯ ದಿನಗಳು ನೆನಪಾದವು.

 ಶಾಲೆಗೆ ಹೋಗುವ ದಿನದಲ್ಲಿ ಅಪ್ಪ-ಅಮ್ಮ ಕಷ್ಟಪಟ್ಟು ದುಡಿದು ಹೊಟ್ಟೆ ಬಟ್ಟೆ ನೋಡಿಕೊಳ್ಳುತ್ತಿದ್ದರು. ಅವರ ಕಾಲವಾದ ನಂತರ  ಅಣ್ಣಂದಿರು ತಮ್ಮ-ತಮ್ಮ ಹಿಸೆ ತೆಗೆದುಕೊಂಡರು. ಪುರೋಹಿತ್ಯ ಮಾಡುತ್ತಾ ತಮ್ಮ ನೆಲೆ ಕಂಡುಕೊಂಡರು. ಮನೆಯಲ್ಲಿ ಕಿರಿ ಮಗನಾದ ಕಾರಣ ಇನ್ನು ಎಲ್ಲು ನೆಲೆ ಕಾಣದೆ ಇರುವಾಗಲೆ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಲ್ಲರು ಇದ್ದು ಯಾರು ಕೇಳದಂತಾದೆ. ಆಗ ನೆಂಟರಲ್ಲಿ ಒಬ್ಬ ಪುಣ್ಯಾತ್ಮರು  ಮುಂದೆ ಬಂದು ಸರ್ಕಾರಿ ಹೈಸ್ಕೂಲ್ ಗೆ ಸೇರಿಸಿದರು ಹಾಗೆ ಮುಂದಿನ ನನ್ನ ವಿದ್ಯಾಬ್ಯಾಸ ಸರಕಾರಿ ಕಾಲೇಜಿನಲ್ಲಿ ಆಯಿತು.  ಇನ್ನು ಊಟಕ್ಕೆ ದಿನಕ್ಕೊಂದು ಮನೆ ಗೊತ್ತು ಮಾಡಿಕೊಟ್ಟರು.  ವಾರಾನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪದ್ದತಿ. ಸೋಮವಾರ ಒಂದು ಮನೆ ಆದರೆ, ಮಂಗಳವಾರ ಒಂದು ಮನೆ…ಭುದುವಾರ ಇನ್ನೊಂದು. ಹೀಗೆ ದಿನ ಒಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಆಗಿತ್ತು. ಹೊಟ್ಟೆ ತುಂಬುವಷ್ಟು ಅನ್ನ ಪದಾರ್ಥ ಸಿಗುತಿತ್ತು. ಆದರೆ ಎಷ್ಟೋ ಮನೆಯಲ್ಲಿ ಎಣ್ಣೆ ಬಂಡಿಯ ವಾಸನೆ ಬರುತ್ತಿತ್ತು. ಆದರೆ ಮಾಡಿರೋ ತಿಂಡಿ ಆಚೆ ಬರ್ತಾ ಇರಲಿಲ್ಲ. ತಿನ್ನೊ ವಯಸ್ಸು ಬಾಯಲ್ಲಿ ನೀರು ಬರುವುದು ಸಹಜ. ಇನ್ನು ಹಬ್ಬ-ಹರಿದಿನದಲ್ಲಿ ಚುರುಪಾರು ಪ್ರಸಾದ ಬಿಟ್ಟರೆ ಇನ್ನೇನು ಕಾಣೆ.

ಭುದುವಾರ ಹೋಗೊ ಮನೆಗೆ ಮಂಗಳವಾರ ಹೋದ್ರೆ ಅಲ್ಲಿ ಊಟ ಸಿಗಲ್ಲ. ಭುದುವಾರ ಹೋಗೋ ಮನೆಗೆ ಭುದುವಾರ, ಮಂಗಳವಾರ ಹೋಗೋ ಮನೆಗೆ ಮಂಗಳವಾರನೆ ಹೋಗ್ಬೇಕಿತ್ತು.

ಇನ್ನು ಎಷ್ಟೋ ಮನೆಯಲ್ಲಿ ಪ್ರೀತಿಯಿಂದ ಊಟ ಹಾಕ್ತಾ ಇದ್ರು. ಇನ್ನು ಎಷ್ಟೊ ಕಡೆ ಮನೆಗೆ ನೆಂಟರು ಬಂದರೆ ವಾರಾನ್ನಕ್ಕೆ ಬಂದ ಹುಡುಗನಿಗೆ ರೇಶನ್ ಪದ್ದತಿಯಲ್ಲಿ ಊಟ. ಮೊದ ಮೊದಲು ಅರ್ಥ ಆಗ್ತಾ ಇರಲಿಲ್ಲ. ನಂತರ ಪರಿಸ್ಥಿತಿ ಮತ್ತು ವಾತಾವರಣ ಎಲ್ಲವನ್ನು ರೊಢಿ ಮಾಡಿಸುತ್ತಾ ಹೋಯಿತು.

ಯಾರು ನಿನಗೆ ಎನು ಇಷ್ಟ ಅಂತ ಕೇಳಿ ಮಾಡುವರಿಲ್ಲ. ಹಸಿವಾದಾಗ ಏನೋ ತಿನ್ನಲು ಸಿಕ್ಕರೆ ಅದೇ ನಮ್ಮ ಪುಣ್ಯ. ಓದಿ ಒಳ್ಳೆಯ ಕೆಲಸ ಹಿಡಿಯಬೇಕು ಅನ್ನೊದು ಒಂದೆ ತಲೆಯಲ್ಲಿ ಇತ್ತು. ದಿನ ಊಟಕ್ಕೆಂದೆ ಒಬ್ಬೊಬ್ಬರ ಮನೆಗೆ ಹೋಗುವುದು ಸ್ವಲ್ಪ ಮುಜುಗರದ  ವಿಷಯವೆ ಆಗಿತ್ತು. ಏನೋ ಕಷ್ಟದ ದಿನದಲ್ಲಿ ಅಷ್ಟಾದರು ಸಹಾಯ ಸಿಕ್ಕಿ ಓದಿ ನನ್ನ ಕಾಲ ಮೇಲೆ ನಿಂತೆನೆಂಬ ಸಮಾಧಾನ.

ಇನ್ನು ವಾಸ್ಥವಕ್ಕೆ ಬಂದ ಶ್ರೀದರ ಮಗಳ ನಡುವಳಿಕೆ ಬದಲಿಸುವ ತಿರ್ಮಾನ ಮಾಡಿದ. ನಾವೆ ಅವಳಗೆ ಹಠ ಕಲಿಸುತ್ತಿದ್ದೆವೆ  ಎಂದು ಅರಿತ. ಮಗಳಿಗು ಸಣ್ಣ ಪುಟ್ಟ ಮನೆ ಕೆಲಸ ರೂಢಿ ಮಾಡಿಸುವ ತಿರ್ಮಾನ ಮಾಡಿದ. ಅಲ್ಲದೆ ಯಾವುದಾದರು ಬೇಕು ಅಂದ ತಕ್ಷಣ ಸಿಕ್ಕರೆ ಅದೇ ಅಭ್ಯಾಸ ಆಗಿಬಿಡುತ್ತದೆ. ಯಾವುದಾದರು ಇಲ್ಲದೆ, ಇದ್ದದ್ದರಲ್ಲೆ ಜೀವನ ನಡೆಸುವದನ್ನು ಕಲಿಸುವುದೆ ಸೂಕ್ತ. ಕಷ್ಟ ಬಂದರೆ ಎದುರಿಸ ಬೇಕು. ಇದ್ದುದರಲ್ಲೆ ಖುಷಿಯಾಗಿ ಇರಬೇಕು. ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಸ್ವಲ್ಪ ತಿಳುವಳಿಕೆನು ಕಲಿಸಬೇಕು. ಮುಂದಿನ ಜೀವನಕ್ಕೆ  ಇವೆಲ್ಲಾ ಮುಖ್ಯ ಎಂದು ಮಗಳಿಗೆ ಹಂತ-ಹಂತವಾಗಿ ಅರ್ಥ ಮಾಡಿಸುವ ತಿರ್ಮಾನ ಮಾಡಿದ.

Sunday, June 20, 2021

ಕುಂಕ್ರಿಯ ಮದುವೆ ಮನೆ

 

                               ಕುಂಕ್ರಿಯ ಮದುವೆ ಮನೆ

ನಮ್ಮ ಆಪ್ತ ನೆಂಟರಲ್ಲಿ ಮದುವೆ ಗೊತ್ತಾಯಿತು ಅಂದ್ರೆ ಏನೋ ಸಡಗರ. ಯಾರದೋ ಮದುವೆ ಆದ್ರೆ ತಾಸಿನ ಮಟ್ಟಿಗೆ ಹೋಗಿ ಬರಬೇಕು. ಅದೇ ಆಪ್ತರದ್ದಾದರೆ ಎರಡು ಮೂರು ದಿನದ ತಿರುಗಾಟ. ಎಲ್ಲಾ ನೆಂಟರನ್ನು ನೋಡಬಹುದು ಮತ್ತು ಅವರ ಜೊತೆ ಹರಟೆ ಹೊಡೆಯುತ್ತಾ ಒಂದಷ್ಟು ಸುದ್ದಿಯನ್ನು ಸಂಗ್ರಹಿಸಬಹುದು.

ಇನ್ನು ಈ ಕುಂಕ್ರಿಯ ವಿಷಯಕ್ಕೆ ಬಂದರೆ ಮದುವೆ ಕರೆಯಲು ಬಂದಾಗಲೆ ತಾನು ಬರುವ ಆಶ್ವಾಸನೆ ನೀಡಲಾಗುತ್ತದೆ. ಅದರಲ್ಲು ತನಗೆ ಇಷ್ಟವಾದ ಬಟ್ಟೆ ಹಾಕಿಕೊಳ್ಳುವ ತಯಾರಿ ನಡೆಯುತ್ತದೆ.ಈ ಬಾರಿ ಕುಂಕ್ರಿಗೆ ಅವಳ ಅಪ್ಪನ ತಂಗಿ ಅಂದರೆ ಅವಳ ಅತ್ತೆ ಮಗನ ಮದುವೆ ಇತ್ತು. ಅತ್ತೆ ಕರೆಯಲು ಬಂದಾಗಲೆ ಹೇಳಿದ್ದಳು, “ನೋಡೆ ಕುಂಕ್ರಿ ನೀನು ಅಪ್ಪ ಅಮ್ಮನ ಜೋತೆ ನಾಲ್ಕು ದಿನ ಮುಂಚೆ ಬರಬೇಕು” ಅಂತ  ತನ್ನ ಅತ್ತಿಗೆಗೂ ತಾಗುವ ಹಾಗೆ ಹೇಳಿ ಹೋಗಿದ್ದಳು. ಈ ಕುಂಕ್ರಿಗೆ ಅತ್ತೆ ಮನೆ ಮದುವೆಗೆ ಹೋಗುವ ಸಂಭ್ಫ್ರಮ ಜೋರೆ.

ಒಂದು ದಿನ ಅಪ್ಪ ಅಮ್ಮನ ಜೊತೆ ಹೋಗಿ ಮದುವೆಗೆ ಹೊಸ ಬಟ್ಟೆ ಅದರ ಮ್ಯಾಚಿಂಗ್ ಸರ ಬಳೆ ಎಲ್ಲಾ ಖರಿದಿ ಮಾಡಿ ಬಂದಳು.ಕುಂಕ್ರಿ ದಿನ ಅದನ್ನೆಲ್ಲಾ ನೋಡುತ್ತಾ ಮದುವೆಗೆ ಹೋಗಲು ತುದಿಗಾಲಿನಲ್ಲಿ ನಿಂತಳು. ಆದರೆ ಕುಂಕ್ರಿಯ ಅಮ್ಮನಿಗೆ ತನಗೊಸ್ಕರ ತಂದ ಸೀರೆ ಅಷ್ಟಾಗಿ ಗ್ರಾಂಡ್ ಆಗಿ ಇಲ್ಲ, ನಾದಿನಿಯ ಮನೆಯಲ್ಲಿ ಮದುವೆ ದಿನ ತನ್ನ ಸೀರೆ ಸ್ವಲ್ಪ ಸದರವಾಯಿತೇನೊ ಅನ್ನೊ ಅಳುಕು ಶುರುವಾಯಿತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗದೆ ಗಂಡನ ಬಳಿ ಹೇಳಿಕೊಂಡಳು. ಗಂಡನು ಎನು ಮಾಡಲು ತೊಚದೆ ಸಪ್ಪೆ ಮುಖ ಮಾಡಿಕೊಂಡನು. ನಾವು ಒಂದು ಬಿಳಿ ಪಂಜೆ ಅಂಗಿ ಹಾಕಿದರು ಯಾರು ಕೇಳುವರಿಲ್ಲ. ಕುಂಕ್ರಿಗೆ ಒಳ್ಳೆ ಬಟ್ಟೆ ಬಂತು. ನಿನ್ಗೆ ಒಳ್ಳೆ ಕಾಂಚಿವರಂ ಸೀರೆ ತರೋಕೆ ಹೋದ್ರೆ ಹತ್ತು ಸಾವಿರಕಿಂತ ಕಮ್ಮಿ ಎನು ಸಿಗಲ್ಲ. ಏನ್ ಮಾಡ್ಲಿ ಈಗ ಮನೆ ಲೋನ್, ಗ್ರಹಪ್ರವೇಶಕ್ಕೆ ಆದ ಖರ್ಚು ಅಂತ ಸ್ವಲ್ಪ ಕೈ ಹಿಡಿಬೇಕಾಗಿದೆ. ಇನ್ನು ತಂಗಿಗೆ ಅಣ್ಣನಾಗಿ ತವರು ಮನೆ ಉಡುಗೊಗೆ ಅಂತ ಚನ್ನಾಗಿಯೆ ಕೊಡಬೇಕು. ಏನ್ ಮಾಡ್ಲಿ. ನನ್ನ ಪರಿಸ್ಥಿತಿನು ಅರ್ಥ ಮಾಡಿಕೊ ಎಂದು ತನ್ನ ಕಷ್ಟ ತೊಡಿಕೊಂಡನು. ಅಷ್ಟರಲ್ಲೆ ಕುಂಕ್ರಿ ತಟ್ ಅಂತ, “ಅಮ್ಮ ನಿನ್ನ ಪಿಂಕ್ ಸೀರೆ ಉಟ್ಟಗೊ. ಅದು ನನ್ನ ಪೇವರೆಟ್ ಕಲರ್. ತುಂಬಾ ಚನ್ನಾಗಿ ಇದೆ ಆ ಸೀರೆ ಅಂದಳು”. ಇದಕ್ಕೆ ಕುಂಕ್ರಿಯ ಅಪ್ಪನು ತಲೆ ಆಡಿಸಿದನು. ಆದರೆ ಇದು ಕುಂಕ್ರಿಯ ಅಮ್ಮನಿಗೆ ಸಮಾಧಾನ ಆಗಲಿಲ್ಲ. “ಸಾಕು ಸುಮ್ಮನಿರಿ ಯಾವುದೆ ಹುಟ್ಟುಹಬ್ಬ ಆಗಲಿ, ಮುಂಜಿ ಆಗಲಿ ಅದೆ ಸೀರೆ ಆಗಿದೆ. ನಮ್ಮ ನೆಂಟರು, ನಿಮ್ಮ ನೆಂಟರು ಎಲ್ಲಾ ನೋಡಿ ಆಗಿದೆ. ಯಾಕೋ ದೊಡ್ಡ ಮದುವೆ ನಮ್ಮ ಎಲ್ಲಾ ನೆಂಟರು ಬರುವರು.ಸ್ವಲ್ಪ ದೊಡ್ಡ ಸೀರೆ ಉಡುವ ಆಸೆ” ಎಂದು ಹೇಳಿಕೊಂಡಳು. ಆದರು ಗಂಡನ ಪರಿಸ್ಥಿತಿ ಅರ್ಥಮಾಡಿಕೊಂಡು ಗಂಡನಿಗು ಕಷ್ಟ ಕೊಡಲು ಮನಸ್ಸಿಲ್ಲದೆ ಏನ್ ಮಾಡಬೇಕು ಎಂದು ತೋಚದೆ ತನ್ನಷ್ಟಕ್ಕೆ ಆಲೋಚನೆ ಮಾಡಿದಳು.

ಆಗ ತಟ್ ಅಂತ ನೆನಪಾಗಿದ್ದು ತನ್ನ ತಂಗಿಯ ಹೊಸ ಕಾಂಚಿವರಂ ಸೀರೆಯ ನೆನಪಾಯಿತು. ಸ್ವಲ್ಪ ದಿನದ ಹಿಂದೆ ತಗೊಂಡಿದ್ದಳು. ಅವಳ ಕಡೆಯ ಯಾವುದೊ ಒಂದು  ಮದುವೆ ಗೆ ಉಟ್ಟಿದ್ದಳು. ಹೊಸದಾಗಿ ಗ್ರಾಂಡ್ ಆಗಿ ಇದೆ. ಅಕ್ಕ ತಂಗಿ ಬೇಕಾದಷ್ಟು ಸಲ ತಮ್ಮ ಸೀರೆಗಳನ್ನು ಬದಲಾಯಿಸಿಕೊಂಡಿದ್ದರು.  ಬೇಕಿದ್ದರೆ ನೀನು ಯಾವಾಗಾದರು ಊಡು ಅಂದಿದ್ದು ನೆನಪಾಯಿತು. ತಂಗಿಯ ಹೊಸ ಸೀರೆ ಉಟ್ಟು ಮದುವೆಗೆ ಹೋಗೋ ಪ್ಲಾನ್ ಮಾಡಿದಳು.

ಇನ್ನೇನು ಮದುವೆ ದಿನ ಬಂದೆಬಿಡ್ತು. ಎಲ್ಲಾ ರೆಡಿ ಆಗಿ ಹೋದರು. ಮದುವೆ ದಿನ ಕುಂಕ್ರಿ ಮಿಂಚಿದ್ದೆ ಮಿಂಚಿದ್ದು. ಎಲ್ಲರ ಸೀರೆ ಒಡವೆ ನೋಡುತ್ತಾ, ಮದುಮಗಳ ಜಡೆಬಿಲ್ಲೆ, ನತ್ತು, ಹೀಗೆ ತನ್ನ ಆಸಕ್ತಿ ಇರೋ ವಿಷಯದ ಮೇಲೆ ಪ್ರಶ್ನೇ ಕೇಳಿ ಎಲ್ಲರ ಗಮನ ಸೆಳೆದು ಒಡಾಡಿದಳು.

ಹೀಗೆ ಎಲ್ಲಾ ಹರಟೆ ಹೊಡೆಯುತ್ತ ಕುಳಿತಿದ್ದರು. ಅಲ್ಲೇ ಸಂಭಂದಿಕರಲ್ಲಿ ಒಬ್ಬರು ಕುಂಕ್ರಿಯ ತಾಯಿಯ ಹತ್ತಿರ ನಿಮ್ಮ ಸೀರೆ ತುಂಬಾ ಚನ್ನಾಗಿ ಇದೆ. ಎಲ್ಲಿ ತಗೊಂಡ್ರಿ ಅಂತ ಕೇಳಿದರು. ಆಗ ಕುಂಕ್ರಿಯ ಅಮ್ಮ ಸಂಬ್ರಮದಿಂದ ಮದುವೆ ಗೆ ಅಂತ ಒಂದು ದಿನ ಚಿಕ್ಕಪೇಟೆಗೆ ಹೋಗಿ ಸುದರ್ಶನ್ ಸಿಲ್ಕ್ ನಲ್ಲಿ ತಗೊಂಡೆ. ಹದಿನೈದು ಸಾವಿರ ಕಂಚಿ ಸೀರೆ ಅಂದಳು. ಆಗ ಅಲ್ಲೆ ಇದ್ದ ಸತ್ಯವಂತ  ಕುಂಕ್ರಿ ,”ಅಯ್ಯೊ..ಅಮ್ಮ ಇದು ನೀನು ತಗೊಂಡ ಸೀರೆ ಅಲ್ಲ. ಇದು ಚಿಕ್ಕಮ್ಮನ ಸೀರೆ. ನಾವು ಅವರ ಮನೆಗೆ ಒಂದು ದಿನ ಹೋಗಿ ತಂದ್ವಿ. ನಿನ್ನ ಸೀರೆ ಸಿಂಪಲ್ ಆಗಿ ಇದೆ ಅದನ್ನ ಉಡಲ್ಲ ಅಂತ ಅಪ್ಪನ ಹತ್ತಿರ ಹೇಳಿದ್ದು ಮರೆತು ಬಿಟ್ಯಾ” ಅಂತ ಕುಂಕ್ರಿ ಚಾಚು ತಪ್ಪದೆ ಸತ್ಯವನ್ನು ಒಂದೆ ಉಸುರಿಗೆ ಹೇಳಿದಳು. ಕುಂಕ್ರಿಯ ಮಾತಿಗೆ ಅಮ್ಮನ ಮುಖ ಪೆಚ್ಚಾಯಿತು. ಇನ್ನು ಉಳಿದವರು ಏನು ಮಾತಾಡದೆ ಮನಸ್ಸಿನಲ್ಲೆ ನಕ್ಕರು.