Sunday, June 27, 2021

ವಾರಾನ್ನ

 

                                     ವಾರಾನ್ನ

ಸ್ಕೊಲ್ ನಿಂದ ಬಂದ ಸಾನ್ವಿ ಒಂದೆ ಸಮನೆ ಅಮ್ಮನ ಹತ್ತಿರ ರಗಳೆ ಶುರು ಮಾಡಿದಳು. “ಏನಮ್ಮಾ,  ಇವತ್ತಾದ್ರು  ಪಾವ್ ಭಾಜಿ ಮಾಡ್ತಿಯಾ ಅಂದ್ಕೊಂಡಿದ್ದೆ. ಆದ್ರೆ ನೀನು ಸುಮ್ನೆ ಬ್ರೆಡ್ ಬೇಯಿಸಿದ್ದಿಯಾ. ನನಗೆ ಇವತ್ತು ಏನಾದ್ರು ಡಿಫರೆಂಟ್ ಆಗಿರೋದು ತಿನ್ನಬೇಕು  ಅಂತ ಆಸೆ ಆಗ್ತಾ ಇದೆ” ಅಂತ ಒಂದೆ ಸಮನೆ  ಸಾನ್ವಿ ಅಮ್ಮನ ಹತ್ತಿರ ರಗಳೆ ತೆಗೆದಳು. ಸಾನ್ವಿ ಅಮ್ಮ ಸರೋಜ ಮಗಳಿಗೆ ತಾನು ಶಾಲೆಯಿಂದ ಸುಸ್ತಾಗಿ ಬಂದಿದ್ದಿನಿ. ಅಲ್ಲದೆ ತನಗು ಒಂದೆ ಸಮನೆ ಒಂದಾದ ಮೇಲೆ ಒಂದು ತರಗತಿ ಹಾಗು ಅಲ್ಲಿ ಮಕ್ಕಳ ಹತ್ತಿರ ಕೂಗಿ ಸುಸ್ತಾಗಿರೋದನ್ನು ಸಾನ್ವಿಗೆ ತಿಳಿಸಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಇದೆಲ್ಲಾ ಅರ್ಥ ಆಗದೆ ಇರೋ ವಯಸ್ಸೆನಲ್ಲ ಸಾನ್ವಿದು. ಆದರೆ ಸಾನ್ವಿ  ಬೆಳೆದ ವಾತಾವರಣ ಅವಳಿಗೆ ಬೆರೆಯವರ ಕಷ್ಟದ ಅರಿವು ಇಲ್ಲದಂತೆ ಮಾಡಿತ್ತು. ಇದು ಸಾನ್ವಿಯ ತಪ್ಪು ಅನ್ನುವುದಕಿಂತ ಅವಳ ಬೆಳೆದ ಮತ್ತು ಬೆಳೆಸಿದವರ ಪಾತ್ರವೆ ಜಾಸ್ತಿ ಇತ್ತು.

ಸರೋಜ ಮತ್ತು ಶ್ರೀದರ ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸ ಮುಗಿಸಿದವರು. ತಾವು ಕಷ್ಟ ಪಟ್ಟಂತೆ ತಮ್ಮ ಮಗಳು ಕಷ್ಟ ಪಡುವುದು ಬೇಡ ಎಂದು ಮೊದಲಿನಿಂದಲು ಸ್ವಲ್ಪ ಮುದ್ದಾಗಿ ಬೆಳೆಸಿದರು. ಆದರೆ ಈ ನಡುವೆ ಮನೆಯಿಂದಲೆ ಕೆಲಸ ಮಾಡುವ ಕಾರಣ ಶ್ರೀದರನಿಗೆ ಮಗಳ ನಡುವಳಿಕೆ ಸ್ವಲ್ಪ ಕಿರಿಕಿರಿ ಉಂಟು ಮಾಡಿತ್ತು. ತಾವೆ ಎಲ್ಲೊ ಎಡವಿದೆವು ಅಂತ ಅನ್ನಿಸಲು ಶುರುವಾಯಿತು. ಹಾಗೆ ಯೋಚನೆಯಲ್ಲಿ ಮುಳುಗಿದ ಶ್ರೀದರನಿಗೆ ತನ್ನ ಹಳೆಯ ದಿನಗಳು ನೆನಪಾದವು.

 ಶಾಲೆಗೆ ಹೋಗುವ ದಿನದಲ್ಲಿ ಅಪ್ಪ-ಅಮ್ಮ ಕಷ್ಟಪಟ್ಟು ದುಡಿದು ಹೊಟ್ಟೆ ಬಟ್ಟೆ ನೋಡಿಕೊಳ್ಳುತ್ತಿದ್ದರು. ಅವರ ಕಾಲವಾದ ನಂತರ  ಅಣ್ಣಂದಿರು ತಮ್ಮ-ತಮ್ಮ ಹಿಸೆ ತೆಗೆದುಕೊಂಡರು. ಪುರೋಹಿತ್ಯ ಮಾಡುತ್ತಾ ತಮ್ಮ ನೆಲೆ ಕಂಡುಕೊಂಡರು. ಮನೆಯಲ್ಲಿ ಕಿರಿ ಮಗನಾದ ಕಾರಣ ಇನ್ನು ಎಲ್ಲು ನೆಲೆ ಕಾಣದೆ ಇರುವಾಗಲೆ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಲ್ಲರು ಇದ್ದು ಯಾರು ಕೇಳದಂತಾದೆ. ಆಗ ನೆಂಟರಲ್ಲಿ ಒಬ್ಬ ಪುಣ್ಯಾತ್ಮರು  ಮುಂದೆ ಬಂದು ಸರ್ಕಾರಿ ಹೈಸ್ಕೂಲ್ ಗೆ ಸೇರಿಸಿದರು ಹಾಗೆ ಮುಂದಿನ ನನ್ನ ವಿದ್ಯಾಬ್ಯಾಸ ಸರಕಾರಿ ಕಾಲೇಜಿನಲ್ಲಿ ಆಯಿತು.  ಇನ್ನು ಊಟಕ್ಕೆ ದಿನಕ್ಕೊಂದು ಮನೆ ಗೊತ್ತು ಮಾಡಿಕೊಟ್ಟರು.  ವಾರಾನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪದ್ದತಿ. ಸೋಮವಾರ ಒಂದು ಮನೆ ಆದರೆ, ಮಂಗಳವಾರ ಒಂದು ಮನೆ…ಭುದುವಾರ ಇನ್ನೊಂದು. ಹೀಗೆ ದಿನ ಒಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಆಗಿತ್ತು. ಹೊಟ್ಟೆ ತುಂಬುವಷ್ಟು ಅನ್ನ ಪದಾರ್ಥ ಸಿಗುತಿತ್ತು. ಆದರೆ ಎಷ್ಟೋ ಮನೆಯಲ್ಲಿ ಎಣ್ಣೆ ಬಂಡಿಯ ವಾಸನೆ ಬರುತ್ತಿತ್ತು. ಆದರೆ ಮಾಡಿರೋ ತಿಂಡಿ ಆಚೆ ಬರ್ತಾ ಇರಲಿಲ್ಲ. ತಿನ್ನೊ ವಯಸ್ಸು ಬಾಯಲ್ಲಿ ನೀರು ಬರುವುದು ಸಹಜ. ಇನ್ನು ಹಬ್ಬ-ಹರಿದಿನದಲ್ಲಿ ಚುರುಪಾರು ಪ್ರಸಾದ ಬಿಟ್ಟರೆ ಇನ್ನೇನು ಕಾಣೆ.

ಭುದುವಾರ ಹೋಗೊ ಮನೆಗೆ ಮಂಗಳವಾರ ಹೋದ್ರೆ ಅಲ್ಲಿ ಊಟ ಸಿಗಲ್ಲ. ಭುದುವಾರ ಹೋಗೋ ಮನೆಗೆ ಭುದುವಾರ, ಮಂಗಳವಾರ ಹೋಗೋ ಮನೆಗೆ ಮಂಗಳವಾರನೆ ಹೋಗ್ಬೇಕಿತ್ತು.

ಇನ್ನು ಎಷ್ಟೋ ಮನೆಯಲ್ಲಿ ಪ್ರೀತಿಯಿಂದ ಊಟ ಹಾಕ್ತಾ ಇದ್ರು. ಇನ್ನು ಎಷ್ಟೊ ಕಡೆ ಮನೆಗೆ ನೆಂಟರು ಬಂದರೆ ವಾರಾನ್ನಕ್ಕೆ ಬಂದ ಹುಡುಗನಿಗೆ ರೇಶನ್ ಪದ್ದತಿಯಲ್ಲಿ ಊಟ. ಮೊದ ಮೊದಲು ಅರ್ಥ ಆಗ್ತಾ ಇರಲಿಲ್ಲ. ನಂತರ ಪರಿಸ್ಥಿತಿ ಮತ್ತು ವಾತಾವರಣ ಎಲ್ಲವನ್ನು ರೊಢಿ ಮಾಡಿಸುತ್ತಾ ಹೋಯಿತು.

ಯಾರು ನಿನಗೆ ಎನು ಇಷ್ಟ ಅಂತ ಕೇಳಿ ಮಾಡುವರಿಲ್ಲ. ಹಸಿವಾದಾಗ ಏನೋ ತಿನ್ನಲು ಸಿಕ್ಕರೆ ಅದೇ ನಮ್ಮ ಪುಣ್ಯ. ಓದಿ ಒಳ್ಳೆಯ ಕೆಲಸ ಹಿಡಿಯಬೇಕು ಅನ್ನೊದು ಒಂದೆ ತಲೆಯಲ್ಲಿ ಇತ್ತು. ದಿನ ಊಟಕ್ಕೆಂದೆ ಒಬ್ಬೊಬ್ಬರ ಮನೆಗೆ ಹೋಗುವುದು ಸ್ವಲ್ಪ ಮುಜುಗರದ  ವಿಷಯವೆ ಆಗಿತ್ತು. ಏನೋ ಕಷ್ಟದ ದಿನದಲ್ಲಿ ಅಷ್ಟಾದರು ಸಹಾಯ ಸಿಕ್ಕಿ ಓದಿ ನನ್ನ ಕಾಲ ಮೇಲೆ ನಿಂತೆನೆಂಬ ಸಮಾಧಾನ.

ಇನ್ನು ವಾಸ್ಥವಕ್ಕೆ ಬಂದ ಶ್ರೀದರ ಮಗಳ ನಡುವಳಿಕೆ ಬದಲಿಸುವ ತಿರ್ಮಾನ ಮಾಡಿದ. ನಾವೆ ಅವಳಗೆ ಹಠ ಕಲಿಸುತ್ತಿದ್ದೆವೆ  ಎಂದು ಅರಿತ. ಮಗಳಿಗು ಸಣ್ಣ ಪುಟ್ಟ ಮನೆ ಕೆಲಸ ರೂಢಿ ಮಾಡಿಸುವ ತಿರ್ಮಾನ ಮಾಡಿದ. ಅಲ್ಲದೆ ಯಾವುದಾದರು ಬೇಕು ಅಂದ ತಕ್ಷಣ ಸಿಕ್ಕರೆ ಅದೇ ಅಭ್ಯಾಸ ಆಗಿಬಿಡುತ್ತದೆ. ಯಾವುದಾದರು ಇಲ್ಲದೆ, ಇದ್ದದ್ದರಲ್ಲೆ ಜೀವನ ನಡೆಸುವದನ್ನು ಕಲಿಸುವುದೆ ಸೂಕ್ತ. ಕಷ್ಟ ಬಂದರೆ ಎದುರಿಸ ಬೇಕು. ಇದ್ದುದರಲ್ಲೆ ಖುಷಿಯಾಗಿ ಇರಬೇಕು. ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಸ್ವಲ್ಪ ತಿಳುವಳಿಕೆನು ಕಲಿಸಬೇಕು. ಮುಂದಿನ ಜೀವನಕ್ಕೆ  ಇವೆಲ್ಲಾ ಮುಖ್ಯ ಎಂದು ಮಗಳಿಗೆ ಹಂತ-ಹಂತವಾಗಿ ಅರ್ಥ ಮಾಡಿಸುವ ತಿರ್ಮಾನ ಮಾಡಿದ.

No comments: