Friday, March 29, 2019

ಊರಿಗೆ ಮರಳಿದಾಗ….


                                  ಊರಿಗೆ ಮರಳಿದಾಗ….

 ಸುಬ್ಬು ಜೋಯಿಸರು ಮೂಲತ ಶಿವವೊಗ್ಗ ಹತ್ತಿರದ ಜಾಲಳ್ಳಿ, ಆದರು ಜೀವನ ಕಟ್ಟಿಕೊಂಡಿದ್ದು ಬನಾರಸ್ ಕಾಶಿಯಲ್ಲಿ. ಇದಕ್ಕೆ ಕಾರಣ ತಾವು ಕೇಳುವಷ್ಟು ಸಂಭಾವನೆ ಜಾಲಳ್ಳಿ ಯಂತ ಊರಲ್ಲಿ ಸಿಗದೆ ಇರುವುದು. ಇನ್ನೊಂದು ಜೋಯಿಸರ ಹೆಂಡತಿ ಪಾರ್ವತಿ ಗೆ ಗಂಡನ ಮನೆಯ ಒರಗಿತ್ತಿಯರಿಗೆ ಹೊಂದಿಕೊಳ್ಳಲಾಗದೆ ಗಂಡನ ಹತ್ತಿರ ಬೇರೆ ಮನೆ ಮಾಡುವ ವಿಚಾರವನ್ನು  ಯಾವಗಲು ತಲೆಯಲ್ಲಿ ಹುಳಬಿಡುತ್ತಿದ್ದಳು. ಊರಲ್ಲೆ ಇದ್ದು ಬೇರೆ ಹೋಗುವುದು ಸ್ವಲ್ಪ ಕಷ್ಟವಾಗಿತ್ತು. ತಮ್ಮ ಅಣ್ಣಂದಿರಿಗೆ ಇರುವ ಶಿಷ್ಯ ವರ್ಗ ತಮಗೆ ದೊರಕುವುದು ಕಷ್ಟವೆಂದು ಅವರಿಗೆ ಮೊದಲೆ ತಿಳಿದಿತ್ತು. ಮೊದಲಿನಿಂದಲು ಸ್ವಲ್ಪ ವ್ಯಾಪಾರಿ ಬುದ್ದಿಯವರೆ ಆದ ಕಾರಣ ಭಾವನೆಗಳಿಗೆ ಬೆಲೆ ಕೊಡುವ ಅಣ್ಣಂದಿರು ಸುಬ್ಬು ಜೋಯಿಸರಿಗೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಇವರಿಗೆ ಸಿಕ್ಕ ಬಾಳ ಸಂಗಾತಿ.

ಒಮ್ಮೆ ಜೋಯಿಸರು ಮಾವನ ಮನೆ ಗೊಕರ್ಣಕ್ಕೆ ಹೋದರು. ಅಲ್ಲಿ ತಮ್ಮ ವಾರಗೆಯ ಭಾವಂದಿರ ಜೊತೆ ಮಾತಡುತ್ತಿರುವಾಗ ಬೇರೆ ಊರಿಗೆ ಹೋಗುವ ಯೋಚನೆ ಹೇಳಿದರು. ಅವರು “ ನಮ್ಮ್ ಊರಲ್ಲಿ ಅಷ್ಟಾಗಿ ಪುರೋಹಿತ್ಯ ಸಿಗುವುದಿಲ್ಲ. ಅದು ಅಲ್ದೆ ನಮ್ಮ ಹಿರಿಯಣ್ಣ ತೋಟದ ಕೆಲಸ ಮಾಡಲು ಆಗದ ಕಾರಣ ಅವರೆ ಕರೆದ ಕಡೆ ಹೋಗ್ತಾರೆ. ಸ್ವಲ್ಪ ದೂರದ ಊರಿಗೆ ನನ್ನ ಎರಡನೆ ಅಣ್ಣ ಹೋಗ್ತಾನೆ. ನನ್ಗೆ ಮೇಲಿನ ಸಂಪಾದನೆ ಅಂದ್ರೆ ಪುರೋಹಿತ್ಯಕ್ಕೆ ಹೋಗೋದು. ಈಗ ಕಲಿತು ಕೈ ಬರಿದಾಗಿ ಮನೆಲಿ ಉಳಿದಿದ್ದೀನಿ” ಅಂತ ಬೆಸರದಿಂದ ಹೇಳಿದರು. ಇದಕ್ಕೆ ಅವರ ಒಬ್ಬ ಭಾವ,” ಏನು ನೀವ್ ಇಷ್ಟು ಕಲಿತು ಎಲ್ಲು ಹೋಗಲ್ವ. ನಿಮ್ ಅರ್ದದಷ್ಟು ಕಲಿದೆ ಇರೋ ನಮ್ ಗೊಕರ್ಣದ ಮಕ್ಕಳು ಪಟ್ಟಣ ಸೇರಿ ಎಷ್ಟು ಚನ್ನಾಗಿ ದುಡಿತಿದ್ದಾರೆ. ಕೆಲವೊಬ್ಬರು  ಬೆಂಗಳೂರಂತ ನಗರದಲ್ಲಿ ಸ್ವಂತಕ್ಕೆಂದು ಮನೆ ಬೇರೆ ಮಾಡಿ ಬಾಡಿಗೆಗೆ ಕೊಟ್ಟಿದ್ದು ಇದೆ” ಅಂತ ಅತಿಶಯೋಯ್ತಿ ಮಾಡಿ ಹೇಳಿದರು. ಅಲ್ಲಿ ಕುಳಿತ ಸುಬ್ಬು ಜೋಯಿಸರಿಗೆ ತಲೆ ತಿರಿಗಿತು. ಅಣ್ಣನ ಹತ್ತಿರ ಕೈ ಚಾಚುವುದಕ್ಕಿಂತ ತನಗೆ ಕೈ ತುಂಬ ಸಂಬಳ ಬಂದರೆ ಎಂದು ಕನಸು ಕಂಡರು. ಅಲ್ಲೆ ಇರುವ ಇನ್ನೊಬ್ಬ “ನೀವು ಇಷ್ಟು ಚನ್ನಾಗಿ ಕಲಿತು ಯಾಕ್ ಮನೆಲಿ ಕೆಲಸ ಇಲ್ಲದೆ ಇರ್ತಿರಾ? ನಿಮಗೆ ಸಿಟಿ ಕಡೆನೋ, ಯಾವುದಾದ್ರು ಯಾತ್ರಾ ಸ್ಥಳಕ್ಕೆ ಹೋದ್ರೆ ಒಳ್ಳೆ ಸಂಪಾದನೆ ಮಾಡಬಹುದು” ಅಂದರು.
ಇದಲ್ಲ ಕೇಳುತ್ತಿದ್ದಂತೆ ಸುಬ್ಬು ಜೋಯಿಸರು ಯೋಚನಾ ಸಾಗರದಲ್ಲಿ ಮುಳುಗಿದರು. ಇವರ ಮಾತನ್ನು ನಡು ಮನೆಯಲ್ಲಿ ಇದ್ದ ಪಾರ್ವತಿ ಕೇಳಿದ್ದರು. ಮನಸ್ಸಿನಲ್ಲೆ ದೃಡ ನಿರ್ದಾರ ಮಾಡಿದರು. ಇದೆ ಸರಿಯಾದ ಸಮಯ ಹೇಗಾದರು ಮಾಡಿ ಮೊದಲು ಮನೆಯಿಂದ ಆಚೆ ಬರಬೇಕು. ಆ ಮನೆಯಲ್ಲಿ ಚಾಕರಿ ಮಾಡುತ್ತ ಅವರ ಕೈ ಕೆಳಗೆ ಇರೋದ್ಕಿಂತ  ನಮ್ಮದೆ ಆದ ಪುಟ್ಟ ಸಂಸಾರ ಕಟ್ಟಿಕೊಳ್ಳ ಬೇಕು ಅಂತ ತಿರ್ಮಾನಿಸಿದರು. ಎಲ್ಲ ಆಚೀಚೆ ತಮ್ಮ-ತಮ್ಮ ಕೆಲಸಕ್ಕೆ ಹೋದಾಗ ಪಾರ್ವತಿ ಉಪಾಯವಾಗಿ ಗಂಡನನ್ನು ಕರೆದು ಗಂಡನ ಕಿವಿ ಉದಿದರು.”ನೋಡ್ರಿ ಇದ್ ಸರಿಯಾದ ಸಮ್ಯ. ನನ್ನ ಅಣ್ಣಂದಿರು ಹೇಳಿದ ಹಾಗೆ ನಾವ್ ಹೇಗಾದ್ರು ಮಾಡಿ ನಗರಕ್ಕೊ ಅಥವಾ ಯಾತ್ರಾ ಸ್ಥಳಕ್ಕೊ ಹೋಗೋಣ. ಇದಕ್ಕೆ ಅವರು ಸಹಾಯ ಮಾಡ್ತಾರೆ. ಅವರ ಹತ್ತಿರ ನಾನು ಮಾತಾಡ್ತಿನಿ.  ಮನೆಗೆ ಇನ್ನೆರಡು ದಿನ ತಡವಾಗಿ ಹೋದರು ಪರವಾಗಿಲ್ಲ. ಈಗ್ ಬಂದಾಗ್ಲೆ ಯಾರನ್ನಾದ್ರು ಹಿಡಿದು ನಾವು ಒಂದ್ ಕೆಲಸ ಹಿಡಿದ್ರೆ ಆಯ್ತು. ನೀವು ಏನ್ ಚಿಂತೆ ಮಾಡ್ಬೇಡಿ. ಆ ಮನೆಲಿ ಚಾಕರಿ ಮಾಡಿ-ಮಾಡಿ ನಿಮ್ ಅತ್ತಿಗೆ ಹತ್ತಿರ ಹೇಳಿಸಿಕೊಳ್ಳೊದ್ಕಿಂತ ನಿಮ್  ಕೆಲಸದಲ್ಲಿ ಪ್ರಸಾದ ಮಾಡ್ಕೋಡೋದೊ ಏನೋ ಕೈಲಾಗಿದ್ದು ಕೆಲಸ ಮಾಡಿ ನಾನು ಸಹಾಯ ಮಾಡ್ತೀನಿ. ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರಗೆ ಬಿಳೋಣ. ಇನ್ನು ಯೋಚನೆ ಮಾಡ್ತಾ ಕೂತ್ರೆ ಹೀಗೆ ಮುದುಕರಾಗ್ತೀವಿ” ಅಂತ ಗಂಡನ ಮನಸ್ಸಿಗೆ ನಾಟುವಂತೆ ಹೇಳಿದಳು. ಸುಬ್ಬು ಜೋಯಿಸರಿಗೂ ಹೆಂಡತಿ ಮಾತು ಸರಿ ಅನ್ನಿಸಿತು. ವಯಸ್ಸಿದ್ದಾಗಲೆ ನಾಲ್ಕು ಖಾಸು ದುಡಿದುಕೊಳ್ಳ ಬೇಕು. ಇವಾಗಲೆ ಇಲ್ಲಿ ಯಾರನ್ನಾದರು ಹಿಡಿದು ಒಂದು ಕೆಲಸ ಗಿಟ್ಟಿಸಿಕೊಳ್ಳ ಬೇಕು ಅಂತ ತಿರ್ಮಾನಿಸಿದರು ಮತ್ತು ಈ ವಿಚಾರ ಹೆಂಡತಿಗೂ ಹೇಳಿದರು. ಪಾರ್ವತಿ ಖುಷಿಯಿಂದ ಮುಖ ಅರಳಿತು. 

ಸಂಜೆ ಊಟ ಮುಗಿಸಿ ಹೊರ ಜಗುಲಿಯಲ್ಲಿ ಎಲ್ಲಾ ಗಾಳಿ ಸೇವನೆಗೆಂದು ಕುಳಿತಿದ್ದರು. ಎಲ್ಲರು ಹರಟೆ ಹೊಡೆಯುವಾಗ ಸುಬ್ಬು ಜೋಯಿಸರು ನಿಧಾನವಾಗಿ ಮಾತಿಗೆ ಇಳಿದರು. “ ನಿಮಗೆ ಯಾರಾದರು ಪರಿಚಯದವರು ಇದ್ದರೆ ಹೇಳಿ ನನ್ನ ಕೆಲಸದ ಬಗ್ಗೆ ಅವರ ಹತ್ರ ವಿಚಾರ್ಸತ್ತೀನಿ. ನನ್ಗು  ಒಂದು ಕೆಲ್ಸ್ ಆದ್ರೆ ಸಾಕು. ಯಾವ ಊರಾದರು ಸರಿ. ನಾನು ಕಲಿತ ವಿದ್ಯೆಗೆ ಅನುಗುಣವಾಗಿದ್ದರೆ” ಅಂತ ಹೇಳಿದರು.
ಇತ್ತ ಪಾರ್ವತಿ ಇವರು ಹೇಳೊದ್ಕಿಂತ ಮುಂಚೆನೆ ತನ್ನ ಅಪ್ಪ-ಅಮ್ಮ ಮತ್ತು ಅಣ್ಣಂದಿರ ಹತ್ತಿರ ಮನೆಯ ವಿಚಾರ ಹೇಳಿದ್ದರು. ಅವಳಿಗೆ ಹೇಗಾದರು ಮನೆಯಿಂದ ಆಚೆ ಬರಬೇಕು ಅನ್ನೊದು ಇತ್ತು. ಇದಕ್ಕೆ ಅವಳ ಅಪ್ಪ-ಅಮ್ಮ ಮತ್ತು ಅಣ್ಣಂದಿರ ಬೆಂಬಲ ಇತ್ತು. ಈ ಕಾರಣಕ್ಕಾಗೆ  ಇವರು ಸುಬ್ಬು ಜೋಯಿಸರಿಗೆ ಸಹಾಯ ಮಾಡಲು ಮುಂದಾದರು. 

ಆ ಊರನ ಕಂಠಿ ಜೋಯಿಸರ ಮಗ ಮತ್ತು ಸೊಸೆ ವಾರಣಾಸಿ ಕಾಶಿಯಲ್ಲಿ ವಾಸವಾಗಿದ್ದರು. ಅಲ್ಲಿಗೆ ಬರೋ ಯಾತ್ರಿಗಳಿಗೆ ಪೂವ್ರಜರ ಪಿಂಡ ಕಾರ್ಯಗಳನ್ನು ಮತ್ತು ಇತರೆ ಧಾರ್ಮಿಕ ಕೆಲಸಗಳನ್ನು  ಮಾಡಿಸುತ್ತಿದ್ದರು.  ಅಪರೂಪಕ್ಕೆ ಊರಿಗೆ ಬಂದಾಗ ಅಲ್ಲಿಯ ಆದಾಯದ ಬಗ್ಗೆ ಹೇಳುತ್ತಿದ್ದರು. ಅದು ಅಲ್ಲದೆ ಕಂಠಿ ಜೋಯಿಸರು ಊರಲ್ಲಿ ಕಟ್ಟಿಸಿದ ಮನೆ ನೋಡಿ ಚನ್ನಾಗಿ ಸಂಪಾದಿಸುತ್ತಾರೆ ಎಂದು ಹೇಳಬಹುದಿತ್ತು. ಕಂಠಿ ಜೋಯಿಸರ ಮಗನ ಸಹಾಯ ಪಡೆದು ಸುಬ್ಬು ಜೋಯಿಸರನ್ನು ಕಾಶಿಗೆ ಕಳುಹಿಸುವ ಯೋಚನೆ ಮಾಡಿದರು. ಗೊಕರ್ಣದಿಂದ ಬೇಕಾದಷ್ಟು ಖಾಸಗಿ ಟುರಿಸ್ಟ ಬಸ್ ಹೋಗುತ್ತಿತ್ತು. ಕಾಶಿಗೂ ಗೊಕರ್ಣಕ್ಕು ಏನೋ ಒಂದು ಸಂಭಂದ. ಇಲ್ಲಿಯವರಿಗೆ ಅದು ದೂರದ ಊರಾದರು ಮಾಡುವ ಕೆಲಸ ಒಂದೆ ಆಗಿತ್ತು.

ಅತ್ತ ಸುಬ್ಬು ಜೋಯಿಸರು ತನ್ನ ಅಣ್ಣನ ಹತ್ತಿರ ಕಾಶಿಗೆ ಹೋಗೋ ವಿಷಯವನ್ನು ನಯವಾಗಿ ಮಾತಾಡಿದರು. ಒಮ್ಮೆ ಅಷ್ಟು ದೂರದ ಊರಿಗೆ ಬೇಡ ಅಂತ ಹೇಳಿದರು. ನಾವು ಭೂಮಿ ಇದ್ದು ಭೂತಾಯನ್ನು ಅನಾಥ ಮಾಡಿ ಹೋಗಬಾರದು ಅಂತ ಹೇಳಿದರು.  ಆದರೆ ಸುಬ್ಬು ಜೋಯಿಸರು ಅಣ್ಣನ ಹತ್ತಿರ ನಯವಾಗಿ,” ಇಲ್ಲಣ್ಣ ನಾನೇನು ಖಾಯಂ ಆಗಿ ಅಲ್ಲಿರಲು ಹೋಗ್ತಾ ಇಲ್ಲ. ಏನೋ ಸ್ವಲ್ಪ ದಿನ ದುಡಿದು ಊರಿಗೆ ಬರುತ್ತೇನೆ. ನಮ್ಗೂ ನಿಮ್ಮನ್ನೆಲ್ಲ ಬಿಟ್ಟಿರೊದು ಕಷ್ಟ” ಅಂತ ಅಣ್ಣನನ್ನು ಹೇಗೋ ಒಪ್ಪಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ  ತಮ್ಮನನ್ನು  ಕಾಶಿಗೆ ಬಿಳ್ಕೋಟ್ಟರು. ಜೋಯಿಸರು ದಂಪತಿ ಸಮೇತ ಕಾಶಿಗೆ ಪ್ರಯಾಣ ಬೆಳೆಸಿದರು.

ಮೊದಲೆ ಎರ್ಪಾಡಾದಂತೆ ಕಂಠಿ ಜೋಯಿಸರ ಮಗ-ಸೊಸೆ ಕಾಶಿಯಲ್ಲಿ  ಅವರ ಸಹಾಯಕ್ಕೆ ನಿಂತರು. ಅವರಿಗಾಗಿ ಒಂದು ಸಣ್ಣ ಕೋಲಿಯನ್ನು ಹುಡುಕಿದರು. ಅದು ಅಲ್ಲದೆ ಅವರಿಗೆ ಮೊದಮೊದಲು ಸಣ್ಣ ಪುಟ್ಟ ಕೆಲಸ ದೊರಕಿತು. ಚನ್ನಾಗಿ ಓದಿಕೊಂಡಿರೋ ಜೋಯಿಸರಿಗೆ ಹಿಂದಿಯಲ್ಲಿ ಒಳ್ಳೆ ಹಿಡಿತವಿತ್ತು. ಅದು ಅಲ್ಲದೆ ದಂಪತಿಗಳು ವ್ಯವಹಾರದಲ್ಲಿ ಚಾಣಾಕ್ಷರು. ಜೋಯಿಸರು ಕಷ್ಟ ಪಟ್ಟು ಹಗಲು ರಾತ್ರಿ ದುಡಿಯಲು ಶುರು ಮಾಡಿದರು. ಅವರಿಗೆ ಸರಿಯಾಗಿ ಅವರ ದರ್ಮ ಪತ್ನಿ ಹೆಗಲಿಗೆ ಹೆಗಲಾಗಿ ನಿಂತಳು.
ಸುಬ್ಬು ಜೋಯಿಸರು ಬರುವ ಯಾತ್ರಿಗಳ ಹತ್ತಿರ ನಯವಾಗಿ ಮಾತಾಡಿ ಯಾವ್-ಯಾವುದೋ ಪೂಜೆ ಮಾಡಿಸುತ್ತಿದ್ದರು. ಇತ್ತ ಪಾರ್ವತಮ್ಮನವರೆ ಪ್ರಸಾದ ಮತ್ತು ಪೂಜೆಗೆ ಬೇಕಾಗುವದನ್ನು ಅಣಿ ಮಾಡಿರುತ್ತಿದ್ದರು. ಒಂದಕ್ಕೆ ಎರಡು ದರ ಹಾಕಿ ಭಕ್ತಾದಿಗಳಿಂದ ಹಣ ವಸೂಲಿ ಶುರುವಾಯಿತು. ಇವರ ಭಾಷೆಯ ಮೇಲಿನ ಹಿಡಿತ, ವ್ಯವಹಾರದ ಚಾಣಾಕ್ಷತನ. ಮತ್ತು ಕಾಶಿ ವಿಶ್ವನಾಥನ ಕೃಪೆಯಿಂದ ಸುಬ್ಬು ಜೋಯಿಸರಿಗೆ ಶುಕ್ರದೆಸೆ ಬಿಡಲೆಯಿಲ್ಲ. ತಮಗೆ ಮೊದಲು ಸಹಾಯ ಮಾಡಿದ ಕಂಠಿ ಜೋಯಿಸರು ಯಾವಾಗಲೊ ಮೂಲೆ ಗುಂಪಾದರು. ಅವರ ಕಥೆ ನದಿ ದಾಟಿದ ಮೇಲೆ ಅಂಬಿಗನನ್ನು ನೆನೆಯುವರಾರು ಅಂದಂತಾಯಿತು.

ಕಾಶಿಗೆ ಬಂದ ಮೇಲೆ ದಂಪತಿಗಳಿಗೆ ಒಂದು ಗಂಡು ಮಗು ವಿಶ್ವನಾಥ ಜನಿಸಿದನು.   ಅದರ ಬಾಳಂತನಕ್ಕೆಂದು ಊರಿಗೆ ಹೋಗಿದ್ದರು. ಆಗ ಶಾಸ್ತ್ರದ ಪೂರ್ತಿಗೆ ಗಂಡನ ಮನೆಗೆ ಹೋಗಿದ್ದರು. ಮತ್ತೆ  ಊರಿಗೆ ಹೋಗಿದ್ದು ತುಂಬಾ ವಿರಳ. ವಿಶ್ವನಾಥನ ಶಾಲೆ ಮತ್ತು ಕೆಲಸದ ನೆವ ವೊಡ್ಡಿ ಊರಿನ ಸಂಪರ್ಕದಿಂದ ಸ್ವಲ್ಪ ದೂರಾನೆ  ಉಳಿದರು. 

ಇತ್ತ ವಿಶ್ವನಾಥ ದೊಡ್ಡವನಾಗುತ್ತ ಅಪ್ಪನ ವಿದ್ಯೆಯನ್ನು ಕಲಿತ. ಮೊದಲಿನಿಂದಲು ಪೂಜೆ-ಪುನಸ್ಕಾರದಿಂದ ಬೆಳೆದ ವಿಶ್ವನಾಥನಿಗೆ  ಪುರೋಹಿತ್ಯದಲ್ಲಿ ಆಸಕ್ತಿ ಇತ್ತೊ ಇಲ್ಲವೋ ಅದರೆ ಅನುವಂಶಿಕವಾಗಿ ಅವನ ರಕ್ತದಲ್ಲಿ ಬಂದಿತ್ತು. ತುಂಬಾ ರಾಗವಾಗಿ ಸಂಸ್ಕೃತ ಶ್ಲೋಕವನ್ನು ಹೇಳುತ್ತಿದ್ದ. ಮೊದಲಿನಿಂದಲು ಅಪ್ಪನಿಗೆ ಸಹಾಯ ಮಾಡುತ್ತ ಬಂದ. ಪಿತ್ರ ಪಕ್ಷದಲ್ಲಿ ಕಾಶಿಗೆ ಬರುವ ಯಾತ್ರಿಗಳು ಸ್ವಲ್ಪ ಅಧಿಕ. ಆ ಸಮಯದಲ್ಲಿ ಪಿಂಡ ಕಾರ್ಯಗಳನ್ನು ಹೆಚ್ಚಾಗಿ ಮಾಡಿಸುವುದರಿಂದ ಮಗ ಕೆಲವೊಮ್ಮೆ ಶಾಲೆಗೆ ಹೋಗದೆ ಅಪ್ಪನ ಸಹಾಯಕ್ಕೆ ನಿಲ್ಲುತ್ತಿದ್ದ. 

ಗೊಕರ್ಣದಿಂದ ಬರೋ ಟುರಿಸ್ಟ ಬಸ್ ಪ್ರಯಾಣಿಕರು ಹೆಚ್ಚಾಗಿ ಇವರ ಬಳಿಯೆ ಬರುತ್ತಿದ್ದರು. ಸುಬ್ಬು ಜೋಯಿಸರಿಗೂ ಮತ್ತು ಅವರ ಭಾವನಿಗೂ ಕಮಿಶನ್  ವ್ಯವಹಾರ ಇತ್ತು. ಅಲ್ಲಿಂದ ಬರೋ ಯಾತ್ರಿಕರನ್ನು  ಸುಬ್ಬು ಜೋಯಿಸರ ಹತ್ತಿರನೆ ಕಳಿಸುತ್ತಿದ್ದರು. ಅವರೆಲ್ಲ ಪರಿಚಯ ಇಲ್ಲದ ಊರಲ್ಲಿ ಯಾರನ್ನು ಹುಡುಕುವುದು ಎಂದು ಇವರ ಬಳಿಯೆ ಪೂಜೆ ಮಾಡಿಸುತ್ತಿದ್ದರು. ಅದು ಅಲ್ಲದೆ ಮಗನನ್ನು ಇವರೊಟ್ಟಿಗೆ ಊರನ್ನು ತೋರಿಸಲು ಬಿಡುತ್ತಿದ್ದರು. ವಿಶ್ವನಾಥ ಅಪ್ಪ-ಅಮ್ಮನ ಬಳಿ ಹೊರತಾಗಿ ಇವರ ಬಳಿಯೆ ಕನ್ನಡ ಮಾತಡುವದಾಗಿತ್ತು. ವಿಶ್ವನಾಥನಿಗೆ ಕನ್ನಡ ಮಾತಾಡುವವರು ಬಂದರೆ ಎನೋ ಹರುಷ. ಅದು ಅಲ್ಲದೆ ಆ ಟೂರಿಸ್ಟಗಳನ್ನು ಕಾಶಿ ಬೀದಿ ಸುತ್ತಿಸುವ ಮತ್ತು ಗಂಗಾ ಗಿಂಡು, ರುದ್ರಾಕ್ಷಿ, ಹೀಗೆ ಕೆಲವು ಸಾಮಾನುಗಳನ್ನು ಖರೀದಿಸಲು  ಸುಬ್ಬು ಜೋಯಿಸರು ಮಗನನ್ನು ಕಳಿಸುತ್ತಿದ್ದರು. ಅವನು ಅಲ್ಲಿನ ಕೆಲವು ಪರಿಚಯದ ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಇದಕ್ಕೆ ಜೋಯಿಸರು ಅಂಗಡಿಯವರ ಹತ್ತಿರ ಕಮಿಶನ್ ವ್ಯಾಪಾರ ಬೇರೆ ಇಟ್ಟಿದ್ದರು. ವಿಶ್ವನಾಥನಿಗೆ  ಯಾಕೋ ಕರ್ನಾಟಕದಿಂದ ಬಂದ ಯಾತ್ರಿಗಳ ಜೊತೆ ಹೋಗುವುದು ತುಂಬಾ ಇಷ್ಟವಾಗಿತ್ತು.  ಅವನು ಆ ಊರಿನ ಬಗ್ಗೆ ಕೇಳಿಕೊಳ್ಳುತ್ತಿದ್ದ. ಅಲ್ಲಿನ ಪರಿಸರ ನೋಡುವ ಆಸೆ ಆಯಿತು.   ಗಂಗಾ ನದಿಯಲ್ಲಿ ಆಡಿದ ವಿಶ್ವನಾಥನಿಗೆ ಅರಬ್ಬಿ ಸಮುದ್ರದಲ್ಲಿ ಆಡುವ ಆಸೆ ಆಯಿತು. ಚಿಕ್ಕ ವಯಸ್ಸಿನಲ್ಲಿ ನೋಡಿದ ಊರು ವಿಶ್ವನಾಥನಿಗೆ ಅಷ್ಟಾಗಿ ನೆನಪಿಲ್ಲದ ಕಾರಣ ಒಮ್ಮೆ ಊರಿಗೆ ಹೋಗುವ ಮನಸ್ಸಾಯಿತು. ಈ ವಿಚಾರವನ್ನು ಅವನು ಅಪ್ಪ-ಅಮ್ಮನ ಬಳಿ ಹೇಳಿದ. ಇದಕ್ಕೆ ಅಪ್ಪ-ಅಮ್ಮ ಯಾವ ಆಕ್ಷೇಪವು ತೋರಲಿಲ್ಲ. ಬೆಳೆದ ಮಗ ತನ್ನೂರನ್ನು ನೋಡಿ ಬರಲಿ ಎಂದು ಅನಿಸಿತು. ಇನ್ನೊಂದು ಕಾರಣ ಸುಬ್ಬು ಜೋಯಿಸರು ಬರಿ ಕೈನಲ್ಲಿ ಮನೆ ಬಿಟ್ಟು ಬಂದಿದ್ದರು. ಅವರಿಗೆ ಬರೋ ಪಿತ್ರಾರ್ಜಿತ ಆಸ್ತಿ ಅವರ ಅಣ್ಣನ ಬಳಿಯೇ ಇತ್ತು. ಈ ಆಸ್ತಿಯ ವಿಚಾರದ ಬಗ್ಗೆ ಯಾವಾಗಲು ಅಣ್ಣಂದಿರ ಹತ್ತಿರ ಮಾತಾಡಲಿಲ್ಲ. ಅದು ಅಲ್ಲದೆ ತಮ್ಮ ಕೆಲಸದಲ್ಲೆ ಮುಳುಗಿ ಹೋಗಿದ್ದರು. ಆಸ್ತಿ ವಿಷಯದ ಬಗ್ಗೆ ಆಗಲಿ ಅದರ ನೋಡಿಕೊಳ್ಳುವುದರ ಕುರಿತು ಇಲ್ಲಿಯ ವರೆಗೆ ಯಾವ ಮಾತು ಬರದೆ ಇದ್ದ ಕಾರಣ ಜೋಯಿಸರ  ಅಣ್ಣಂದಿರೆ ಎಲ್ಲಾ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಈಗ ಜೋಯಿಸರಿಗೆ ತಮ್ಮ ಪಾಲಿನ ಜಮೀನಿನ ಮೇಲೆ ಆಸಕ್ತಿ ಬಂತು. ಇದಕ್ಕೆ ಅವರ ಹೆಂಡತಿಯ ಸಹಕಾರವು ಇತ್ತು. ಈ ವಿಚಾರವನ್ನು ಮನದಲ್ಲಿ ಇಟ್ಟುಕೊಂಡು ಜೋಯಿಸರು ಮಗನನ್ನು ಒಮ್ಮೆ ಊರಿಗೆ ಕಳಿಸಲು ಒಪ್ಪಿದರು. ಅಲ್ಲಿಯ ವಾತವರಣ ಮತ್ತು ಜಮೀನಿನ ಮೇಲೆ ಮಗನಿಗೆ ಯಾವ ತರಹದ ಭಾವನೆ ಇದೆ ಎಂದು ತಿಳಿಯುವ ಆಸಕ್ತಿಯಿಂದ.
ಅಪ್ಪ-ಅಮ್ಮನ ಅನುಮತಿ ಪಡೆದು ವಿಶ್ವನಾಥ ಗೊಕರ್ಣದಿಂದ ಬರೋ ಟುರಿಸ್ಟ್ ಬಸ್ ನವರ ಜೊತೆ ಅಜ್ಜಿಯ ಮನೆಗೆ ಹೋದ. ಅವನ ಆಸೆಯ ಪ್ರಕಾರ ಸಮುದ್ರದಲ್ಲಿ ಮನಸ್ಸೊ ಇಚ್ಚೆ ಆಟ ಆಡಿದ. ಕಾಶಿ ಗೂ ಗೊಕರ್ಣದ ರಥ ಬಿದಿಗೂ ಏನು ವ್ಯತ್ಯಾಸ ಕಾಣಲಿಲ್ಲ. ಅಲ್ಲು ಸಹ ಬರೋ ಯಾತ್ರಿಗಳ ಜೊತೆ ತಾವು ಮಾಡುವ ವ್ಯವಹಾರವೆ ಎಂದೆನಿಸಿತು. ಮಾವಂದಿರು ಯಾವಾಗಲು ದೇವಸ್ಠಾನದ ಪೂಜೆ ಮತ್ತು ಪಿಂಡ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಸ್ವಲ್ಪ ದಿನ ಅಲ್ಲಿ ಉಳಿದು ಮನಸೋ ಇಚ್ಚೇ ಸಮುದ್ರದಲ್ಲಿ ಆಟವಾಡಿ ತನ್ನ ತಂದೆ ಹುಟ್ಟುದ ಊರಿಗೆ ಹೊರಟನು. ಅಲ್ಲಿ ದೊಡ್ಡಪ್ಪಂದಿರಿಗೆ ಇವನು ಬರುವ ವಿಚಾರ ಸುಬ್ಬು ಜೋಯಿಸರು ಮೊದಲೆ ತಿಳಿಸಿದ್ದರು. ಆ ಕಾರಣ ವಿಶ್ವನಾಥನಿಗೆ ದಾರಿ ತಿಳಿಯುವುದೋ ಇಲ್ಲವೋ ಅನ್ನೋ ಕಾರಣದಿಂದ ತಮ್ಮ ಮಗ ಶಿವುನನ್ನು ಹೊನ್ನಳ್ಳಿ ಬಸ್ ಸ್ಟಾಪ್ ಗೆ ಕಳಿಸಿದ್ದರು.

ಹೊನ್ನಳ್ಳಿಗೆ ಬಂದ ವಿಶ್ವನಾಥನನ್ನು ಶಿವು ಅವನಾಗೆ ಪರಿಚಯ ಮಾಡಿಕೊಂಡು ತಮ್ಮ ಮನೆಗೆ ಕರೆ ತಂದನು. ಮನೆಗೆ ಬಂದ ತಮ್ಮನ ಮಗನನ್ನು ಅವನ ದೊಡ್ಡಪ್ಪಂದಿರು ಮತ್ತು ದೊಡ್ಡಮ್ಮಂದಿರು ತುಂಬಾ ಆತ್ಮಿಯವಾಗಿ ಪ್ರೀತಿಯಿಂದ ಬರ ಮಡಿಕೊಂದರು. ಚಿಕ್ಕ ವಯಸ್ಸಿನಲ್ಲಿ ನೋಡಿದ ವಿಶ್ವನ್ನಾಥನಿಗೂ ಇಗ ನೋಡೋದಕ್ಕು ತುಂಬಾ ವ್ಯತ್ಯಾಸ ಇದೆ ಅಂತ ಹೇಳಿದರು. ಇನ್ನೊಂದು ದೊಡ್ಡಪ್ಪನು ಪಕ್ಕಾ ನನ್ನ ಅಪ್ಪನ ಹೊಲಿಕೆಯೆ ಇದೆ “ಅಜ್ಜನ ಮೊಮ್ಮಗನೆ” ಅಂತ ಪ್ರೀತಿಯಿಂದ ತಲೆ ನೇವರಿಸಿದರು. ದೊಡ್ಡಮ್ಮಂದಿರು ವಾರಗಿತ್ತಿಯ ಮಗ ಎಂದು ನೋಡದೆ ಅವನ ಬಳಿ ಕಾಶಿಯ ಸುದ್ದಿ ಕೇಳಿದರು. ಅಲ್ಲಿಯ ತಿಂಡಿ ಮತ್ತು ಜನ ಜೀವನದ ಬಗ್ಗೆ ಕೇಳುತ್ತಿದ್ದರು. 

ವಿಶ್ವನಾಥನು ಒಮ್ಮೊಮ್ಮೆ ಅಮ್ಮನ ಹತ್ತಿರ ಕೇಳಿದ್ದುಂಟು, “ಅಮ್ಮಾ ನಮ್ಗೆ ನಮ್ಮ ಸಂಭಂದಿಕರಾಗಲಿ, ನಮ್ಮ ಮನೆಯವರಾಗಲಿ ಇಲ್ವಾ.” ಅಂತ ಕೇಳಿದ್ದಕ್ಕೆ  ಅವನ ತಾಯಿ ಏನೋ ಹಾರಿಕೆ ಉತ್ತರ ಕೊಡುತ್ತಿದ್ದರು. ಒಮ್ಮೆಯು ಅವನ ದೊಡ್ಡಪ್ಪನವರ ಬಗ್ಗೆ ಹೇಳಲಿಲ್ಲವಾಗಿತ್ತು. ಇನ್ನು ಇಲ್ಲಿಗೆ ಬಂದು ಉಳಿಯುವುದು ದೂರದ ಮಾತಾಗಿತ್ತು. ಈಗ ಇವರ ಪ್ರೀತಿ ಮತ್ತು ವಿಶ್ವಾಸ ನೋಡಿ ತಾನು ಇವರಿಂದ ದೂರ ಇದ್ದು ಇವರ ಪ್ರೀತಿಯಿಂದ ವಂಚಿತನಾದೆ ಎಂದೆನಿಸಿತು. ಯಾಕೆ ಅಪ್ಪ-ಅಮ್ಮ ಮನೆಯವರ ಬಗ್ಗೆ ಒಂದು ಮಾತಾಡದೆ ದೂರದ ಊರಲ್ಲಿ ಅಪರಿಚರಂತೆ ಇದ್ದರು ಎಂದು ಯೋಚಿಸಿದ.

ವಿಶ್ವನಾಥ ಬಂದಾಗಿನಿಂದ ಅವರ ದೊಡ್ಡಮ್ಮಂದಿರು ರುಚಿ-ರುಚಿಯಾಗಿ ಊಟ ಬಡಿಸುತ್ತಿದ್ದರು. ಮಾತಿಗೊಮ್ಮೆ” ಸಂಕೋಚ ಮಾಡಿಕೊಳ್ಳ ಬೇಡ” ಅನ್ನುತ್ತಿದ್ದರು. ಯಾರಾದರು ಊಟದ ಸಮಯಕ್ಕೆ ಇವರ ಮನೆ ಹತ್ತಿರದ ದೇವಸ್ಥಾನಕ್ಕೆ ಬಂದರೆ ಇವರ ಮನೆಗೆ ಬಂದು ಊಟ ಮಾಡುತ್ತಿದ್ದರು. ಅವರನ್ನು ತುಂಬಾ ಅಕ್ಕರೆಯಿಂದ ಬರ ಮಾಡಿಕೊಂಡು ಊಟ ಬಡಿಸುತ್ತಿದ್ದರು. ಇದನ್ನು ನೋಡಿದ ವಿಶ್ಬನಾಥನಿಗೆ ಬಹಳ ಆಶ್ಚರ್ಯವಾಯಿತು.  ತಮ್ಮ ಮನೆಯಲ್ಲಿ ಅಮ್ಮ ಒಂದು ಬೋರ್ಡ ಮಾಡಿ ಗೋಡೆಗೆ ತೂಗು ಹಾಕಿದ್ದರು. ಕಾಫಿ, ತಿಂಡಿ, ಊಟ, ಲಸ್ಸಿ, ಹೀಗೆ ಯಾವು ಯಾವುದಕ್ಕೆ ಎಷ್ಟೆಷ್ಟು ಅಂತ ದರಗಳನ್ನು ಬರೆದು ಇಟ್ಟಿದ್ದು ನೆನಪಾಯಿತು. ತೀರ ಧರ್ಮಕ್ಕಾಗಿ ಇಲ್ಲದಿದ್ದರು, ತಮ್ಮ ಊರಿನಿಂದ ಬಂದ ಪರಿಚಯದವರ ಹತ್ತಿರನು ಹಣ ಎಳೆಯುವುದು ಮತ್ತು ಕೆಲವು ಊರಿನ ಯಾತ್ರಿಗಳು ಕೆಲವೊಮ್ಮೆ ಜಗುಲಿಯಲ್ಲಿ ಮಲಗಿ ಹೋಗುವುದಕ್ಕು ಹಣ ಹೇಳುವುದು ನೆನಪಾಗಿ ಮನಸ್ಸಿನಲ್ಲೆ ನೋವಾಯಿತು. ಇಲ್ಲಿ ದೊಡ್ಡಮ್ಮ ಕೈ ತುಂಬಾ ಬಡಿಸುತ್ತಿದ್ದರು. ಬಿಸಿಲಲ್ಲಿ ಬಂದವರಿಗೆ  ಮಜ್ಜಿಗೆ ಕೊಡಿತ್ತಿದ್ದರು. ಇಲ್ಲಿಯ ವಾತಾವರಣಕ್ಕು ತಮ್ಮ ಮನೆಯ ವಾತವರಣಕ್ಕು ಅಜಗಜಾಂತರ ಎಂದೆನಿಸಿತು.

ವಿಶ್ವನಾಥನ ದೊಡ್ಡಪ್ಪನ ಮಕ್ಕಳು ಅವನನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಎಲ್ಲರು ಸೇರಿ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ ತಮ್ಮದೆ ಊರಿನ ವಾರಗೆಯ ಹುಡುಗರ ಜೊತೆ ಹರಟೆ ಹೊಡೆಯುತ್ತ ಅವರದೆ ಆದ ಒಂದು ಗೆಳೆಯರ ದಂಡಿತ್ತು. ಅಲ್ಲೆ ಹತ್ತಿರ ಹರಿಯುವ ತುಂಗಾ ನದಿಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದರು. ಅಲ್ಲಿನ ಪ್ರಶಾಂತತೆ ವಿಶ್ವನಾಥನಿಗೆ ಬಹಳ ಇಷ್ಟವಾಯಿತು. ಯಾವಾಗಲು ಗಿಜಿಗುಡೊ ಜನ, ಮಲೀನವಾದ ಗಂಗಾ ನೀರು, ಅದೆಲ್ಲ ನೋಡಿದ ವಿಶ್ವನಾಥನಿಗೆ ಯಾವುದೋ ಸ್ವರ್ಗಕ್ಕೆ ಬಂದಂತೆ ಭಾಸವಾಯಿತು. ಅಪ್ಪ-ಅಮ್ಮ ಇಷ್ಟು ಒಳ್ಳೆ ಊರು ಬಿಟ್ಟು ಯಾಕೆ ದೂರದ ಊರಲ್ಲಿ ಇದ್ದಾರೆ ಅನ್ನೋದೆ ಯಕ್ಷ ಪ್ರಶ್ನೆ ಆಯಿತು.

ಒಮ್ಮೆ ತಾನೊಬ್ಬನೆ ತೋಟ ಗದ್ದೆ ಒಡಾಡುವಾಗ ನಾವೆಲ್ಲರು ಇವರ ಬಳಿ ಬಂದು ಯಾಕೆ ಇರಬಾರದು ಅಂದೆನಿಸಿತು. ಅಪರಿಚಿತ ಊರಲ್ಲಿ ಅನಾಥರಂತೆ ದುಡಿತಾ ಇರೋದ್ಕಿಂತ ನಮ್ಮೂರಲ್ಲೆ ಎಲ್ಲರ ಜೊತೆ ಇರೋದು ಒಳ್ಳೆಯದು. ಒಬ್ಬರಿಗೊಬ್ಬರು ಕಷ್ಟ-ಸುಖಕ್ಕೆ ಆಗಬಹುದು ಅಂತ ಯೋಚಿಸಿದನು. 

ವಿಶ್ಬನಾಥ ಹೊರಡುವ ಸಮಯ ಬಂದಿತು. ಮನಸ್ಸಿಲ್ಲದ ಮನಸ್ಸಿನಿಂದ ದೊಡ್ಡಪ್ಪನವರ ಆಶೀರ್ವಾದ ಪಡೆದು ಹೊರಟನು. ಆಗ ದೊಡ್ಡಪ್ಪ,”ಅಪ್ಪ-ಅಮ್ಮನನ್ನು ಹೇಳಿದ್ದೀನಿ ಅಂತ ಹೇಳಪ್ಪ. ಅವರಿಗೂ ಊರ್ ಕಡೆ ಬರೋಕ್ ಹೇಳು” ಅಂತ ಹೇಳಿದರು. ಶಿವು ಮತ್ತು ಇತರರು ನೀನು ಹೀಗೆ ಬರ್ತಾ ಇರು ಅಂತ ಹೇಳಿದರು. ಇನ್ನೊಂದು ದೊಡ್ಡಪ್ಪ ನಿಮ್ಮದೆ ಆದ ಜಮೀನ್ ಇದೆ. ಅಷ್ಟು ದೂರದ ಊರಲ್ಲಿ ಯಾಕ್ ಇದ್ದೀರಾ. ಇಲ್ಲೆ ನಮ್ಮ ಜೊತೆ ಇರು ಅಂತ ಹೇಳಿದರು. ದೊಡ್ಡಮ್ಮಂದಿರು ಟ್ರೇನಿನಲ್ಲಿ ತಿನ್ನಲು ಬೇಕಾಗುವ ಕೆಲವು ತಿಂಡಿಗಳನ್ನು ಕಟ್ಟಿ ಕೊಟ್ಟರು. ಎಲ್ಲರು ಅವನ್ನನು ಪ್ರೀತಿಯಿಂದ ಬಿಳ್ಕೋಟ್ಟರು. ಶಿವು ತನ್ನ ಸ್ವಂತ ತಮ್ಮ ಎಂಬಂತೆ ಅಪ್ಪಿಕೊಂಡು ಬರ್ತಾ ಇರು ಅಂತ ತುಂಬಾ ಸಲ ಹೇಳಿದನು. 

ಹೊನ್ನಳ್ಳಿಯಿಂದ ಶಿವಮೊಗ್ಗಕ್ಕೆ ಬಂದು ರೈಲು ಹತ್ತಿದ ವಿಶ್ವನಾಥನಿಗೆ ಮನಸ್ಸು ತುಂಬಾ ಭಾರವಾಯಿತು. ಎಲ್ಲರು ಇದ್ದು ಅನಾಥ ಭಾವನೆ ಬರತೊಡಗಿತು. ಅವನ ಮನಸ್ಸಿನಲ್ಲಿ ತಾವೆಲ್ಲರು ಇಲ್ಲಿಗೆ ಬಂದು ತಮ್ಮೂರಲ್ಲೆ ಇರಬೇಕು ಎಂದೆನಿಸಿತು. ಕಾಶಿಗೆ ಹೋದ ಮೇಲೆ ಈ ವಿಷಯ ಮಾತಾಡ ಬೇಕು ಎಂದು ಅಂದುಕೊಂಡನು. ಅಪ್ಪ-ಅಮ್ಮ ಒಪ್ಪುವುದು ಸಂಶಯ ಇತ್ತಾದರು. ಹೇಗಾದ್ರುಮರಳಿ ಊರಿಗೆ ಬರುವುದು ಅವನ ದೃಡ ನಿರ್ಧಾರವಾಗಿತ್ತು.






Sunday, March 17, 2019

ಹಣ್ಣೆಲೆ ಮಾತಾಡಿದಾಗ


                                               ಹಣ್ಣೆಲೆ ಮಾತಾಡಿದಾಗ

ಸುಶೀಲಮ್ಮನಿಗೆ ಮಗನ ಮನೆಗೆ ಬಂದು ಉಳಿಯೋದು ಅನಿವಾರ್ಯವಾಯಿತು. ಗಂಡ ಸತ್ತ ಮೇಲೆ ಮಕ್ಕಳೆ ಆಸೆ ಅನ್ನೋ ಹಾಗೆ ಬೆಂಗಳೂರಿನಲ್ಲಿ ಇರುವ ಮಗನ ಮನೆಗೆ ಬಂದರು. ನಂಜನಗೂಡಿನಲ್ಲಿ ನಲವತ್ತು ವರ್ಷ ಬಾಳಿ ಬದುಕಿದ ಮನೆ ಊರು ಬಿಟ್ಟು ಬರುವುದು ಅಸಾದ್ಯವೆಂದೆ ತಿಳಿದಿದ್ದರು. ಆದರೆ ಪರಿಸ್ಥಿತಿ ಸಾದ್ಯ ಮಾಡಿತು.
ಮಗ ಪ್ರೇಸ್ಟಿಜ್ ನವರ ಅಪಾರ್ಟಮೆಂಟ್  ನಲ್ಲಿ ಒಂದು  ಪ್ಲಾಟ್ ಖರಿಧಿಸಿದ್ದ. ಅದು ಆಧುನಿಕ ಉಪಕರಣದಿಂದ ತುಂಬಾ ಚನ್ನಾಗಿ ಸುಸಜ್ಜಿತವಾಗಿತ್ತು. ಯವುದು ಇಲ್ಲ ಅನ್ನೊ ಹಾಗೆ ಇಲ್ಲ. ಬೆಳಿಗ್ಗೆ ಮಗ-ಸೊಸೆ ಕೆಲಸಕ್ಕೆ ಹೋದರೆ ಬರೋದು ಸಂಜೆ. ಮೊಮ್ಮಗ ನಿಖಿಲ್ ಮೂರನೆ ಕ್ಲಾಸ್. ಅಜ್ಜಿ ಬಂದ ಮೇಲೆ ಸ್ಕೂಲ್ ನಿಂದ ಸೀದಾ ಮನೆಗೆ ಬರುತ್ತಿದ್ದ.  ಇಲ್ಲ ಅಂದರೆ ಅಲ್ಲೆ ಹತ್ತಿರದ ಲಕ್ಷ್ಮಿ ಆಂಟಿ ಪ್ಲೇ ಹೋಮ್ ನಲ್ಲಿ ಇದ್ದು ಅಮ್ಮನ ಜೊತೆ ಸಂಜೆ ಬರುವ ವಾಡಿಕೆ ಆಗಿತ್ತು. ಆದರೆ ಈಗ ಅಜ್ಜಿಯ ದೆಸೆಯಿಂದ  ನಿಖಿಲ್ ಗೆ ಮನೆ ಮತ್ತು ಅಜ್ಜಿಯ ಪ್ರೀತಿ, ಊಟ, ಉಪಚಾರ ದೊರಕಿತು. ಸುಶೀಲಮ್ಮನಿಗೆ ಮೊಮ್ಮಗನೆ ಎಲ್ಲ ಆಗಿತ್ತು. ಅವನೊಬ್ಬ ನಿಲ್ಲದಿದ್ದರೆ ಅವರಿಗೆ ಇವರ ಪ್ಲಾಟ್ ಬಂಗಾರದ ಪಂಜರವೆ ಸರಿ. ಮೊಮ್ಮಗ ನಿಖಿಲ್  ಕೂಡ ಅಜ್ಜಿ ಗೆ ತುಂಬಾ ಹೊಂದಿಕೊಂಡಿದ್ದ.
ದಿನ ಸಂಜೆ ಅಜ್ಜಿ-ಮೊಮ್ಮಗ ಪ್ಲಾಟ್ ಆವರಣದಲ್ಲಿ ಇರೋ ಪಾರ್ಕ್ ಗೆ ಹೋಗುತ್ತಿದ್ದರು. ಅಲ್ಲಿ ನಿಖಿಲ್ ತನ್ನ ವಾರಗೆಯ ಇತರ ಮಕ್ಕಳ ಜೊತೆ ಆಟವಾಡಿತ್ತಿದ್ದ. ಇಲ್ಲ ಅಂದರೆ ಜಾರುಬಂಡಿ ಅಥವಾ ಜೋಕಾಲಿ ಆಡುತ್ತಿದ್ದ. ಇತ್ತ ಸುಶೀಲಮ್ಮನಿಗೆ ಅವರದೆ ವಯಸ್ಸಿನ ಕಮಲಮ್ಮ ಸಿಕ್ಕಿದರು. ಇಬ್ಬರು ಒಂದೆ ದೋಣಿಯ ಪ್ರಯಾಣಿಕರು. ಅವರು ವಯಸ್ಸಾದ ಮೇಲೆ ಗಂಡ ಮತ್ತು ಹೆಂಡತಿ ಇಬ್ಬರು  ತಮ್ಮ ಊರು ತಿರ್ಥಹಳ್ಳಿ  ಬಿಟ್ಟು ಮಗನ ಮನೆ ಸೇರಿದರು. ಇಬ್ಬರು ಸಮ ಕಾಲಿನರು ತಮ್ಮ ಮೊಮ್ಮಕ್ಕಳು ಆಟ ಆಡುವಾಗ ಹೊತ್ತು ಕಳೆಯಲು ಮಾತಾಡುತ್ತ ತಮ್ಮ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು.
ಒಮ್ಮೆ ಸುಶೀಲಮ್ಮ ತುಂಬಾ ಮಂಕಾಗಿ ಕುಳಿತಿದ್ದರು. ಕಮಲಮ್ಮ ಸುಶೀಲಮ್ಮನ ವಿಚಾರಿಸುತ್ತ, “ಯಾಕ್ ಸುಶೀಲಮ್ಮ ಏನಾಯ್ತು? ಯಾಕ್ ಇಷ್ಟು ಮಂಕಾಗಿದ್ದೀರಾ?” ಎಂದರು. ಆಗ ಸುಶೀಲಮ್ಮ ಬೆಸರದಲ್ಲೆ, “ಏನಿಲ್ಲ ಬಿಡಿ. ದೇವ್ರು ಗಂಡ ಹೆಂಡ್ತಿನ ಜೊತೆಲೆ ಕರ್ಕೊಂಡ್  ಬಿಡ್ಬೇಕು ನೋಡ್ರಿ. ಇದ್ದವರಿಗೆ ಕಷ್ಟ. ಮುಂದೆ ಹೋದವ್ರೆ ಪುಣ್ಯಾತ್ಮರು”. ಅಂದರು. ಕಮಲಮ್ಮನಿಗೆ ಇಷ್ಟು ದಿನ ಒಡನಾಡಿದ ಗೆಳತಿಯ ಮಾತು ಕೇಳಿ ಬೆಸರವಾಯಿತು. ಅವರ ಬೆಸರದ ಬಗ್ಗೆ ತಿಳಿಯದೆ ಅವರಿಗೆ ಸಮಾಧಾನ ಮಾಡುತ್ತ, “ಯಾಕ್ರೀ ಹಾಗ್ ಹೋಗೊ ಮಾತ್ ಆಡ್ತೀರಾ? ನಿಮ್ಗೆ ಅಂತದ್ದು ಏನಾಗಿದೆ? ನೋಡಿ ಮುದ್ದಾದ ಮೊಮ್ಮಗ ನಿಮ್ಮನ್ನ ಎಷ್ಟ್ ಹಚ್ಗೊಂಡಿದ್ದಾನೆ. ಬಾಯ್ ತುಂಬಾ ಅಜ್ಜಿ ಅಂತ ನಿಮ್ ಸೇರಗಲ್ಲೆ ಇರ್ತಾನೆ” ಅಂದರು. ಆಗ ಸುಶೀಲಮ್ಮ ನಿಟ್ಟುಸಿರು ಬಿಡುತ್ತಾ, “ಅದೆ ಕಷ್ಟಕ್ಕೆ ಬಂದಿರೋದು ಕಮಲಮ್ನೋರೆ,,,,ನನ್ನಿಂದನೆ ಅವ್ನು ಓದೋದ್ರಲ್ಲಿ ಹಿಂದ್ ಬಿದ್ದಿದ್ದಾನೆ. ಬರಿ ಟಿ.ವಿ. ನೋಡೋದ್ ಕಲ್ತಿದಾನೆ ಅಂತ ನಿನ್ನೆ ನನ್ನ ಅತ್ತೆ ಅಂತ ನೋಡದೆ, ವಯಸ್ಸಲ್ಲಿ ಹಿರಿಯವಳು ಅಂತ ನೋಡ್ದೆ ರೇಗ್ ಬಿಟ್ಲು” ಅಂದರು. ಇವರ ಮಾತು ಕೇಳಿ ಕಮಲಮ್ಮ, ನಿಟ್ಟುಸಿರು ಬಿಡುತ್ತಾ, “ಅಯ್ಯೋ ಇಷ್ಟಕ್ಕಾ ನೀವು ಇಷ್ಟು ಸಪ್ಪೆ ಮುಖ ಹಾಕಿದ್ದು. ನಮ್ಮನೆಲಿ ಈ ತರ ದಿನ ನಿತ್ಯದ ಕಥೆ ಆಗಿದೆ. ನಾವ್ ಹೆಂಗಸರು ಏನೋ ಮೊದ್ಲಿಂದನು ಅನ್ನಿಸಿಗೊಂಡು ರೂಡಿ ಆಗಿರತ್ತೆ. ನಾಲ್ಕ್ ಹನಿ ಕಣ್ಣೀರ್ ಹಾಕಿ ಮರೆತು ಬಿಡ್ತಿವಿ. ಆದ್ರೆ ನಮ್ ಯಜಮಾನ್ರು ಒಳ್-ಒಳಗೆ ಸಂಕಟ ಪಡೋದು ನೋಡೋಕ್ ಆಗಲ್ಲಾರಿ. ಯಾಕ್ ಆದ್ರು ಮನೆ-ಮಠ ಮಾರಿ ಇಲ್ಲ ಬಂದ್ವೆನೋ ಅನ್ನಿಸಿ ಬಿಟ್ಟಿದೆ”. ಅಂತ ತಮ್ಮ ದುಖಃ ಹೇಳಿಕೊಂಡರು.  ಆಗ ಸುಶೀಲಮ್ಮ ಇವರು ಯಾವಗಲು ಖುಶಿಯಾಗಿ ಇರೋದನ್ನ ನೋಡಿ ,”ಯಾಕ್ರೀ? ಯಾವಗ್ಲು ಖುಶಿಯಾಗಿ ಇರ್ತಿರಾ? ನಿಮ್ಗೆ ಏನಾಯ್ತು? “ ಅಂತ ಕೇಳಿದರು. ಆಗ  ಕಮಲಮ್ಮನೋರು ಬೆಸರದಲ್ಲಿ, ಏನ್ ಖುಶಿನೋ…ಎಲ್ಲ ಹೊಟ್ಟೆಲೆ ಇಟ್ಗೊಳ್ತೀನಿ. ಯಾರತ್ರಾದ್ರು ಮನೆ ಸುದ್ದಿ ಹೇಳಿದೀನಿ ಅಂತ ತಿಳಿದ್ರೆ ಆಚೆ ಬರೋ ಹಾಗು ಇಲ್ಲ. ಮನೆಲೆ ಕುಕ್ಕರ್ ಬಡಿ ಬೇಕು. ಹಾಗ್ ಮಾಡ್ತಾಳೆ. ನಮ್ಮ್ ಯಜವಾನ್ರಂತು ಬಾಯ್ ಬಿಡೊದೆ ಇಲ್ಲ. ಮಾತ್ ಬಂದ್ರು ಮೂಖರ ಹಾಗೆ ಕುಳಿತಿರ್ತಾರೆ” ಅಂತ ಹೇಳಿದರು.
ಸುಶೀಲಮ್ಮನೋರು ಏನೋ ಯೋಚನೆ ಮಾಡ್ತಾ…”ಅಲ್ಲಾರಿ ಮತ್ ಬಾಯ್ ತುಂಬಾ ಅಮ್ಮ-ಅಮ್ಮಾ ಅಂತ ಹೇಳ್ತಾಳಲ್ಲ. ನಾನ್ ತುಂಬಾ ಮೄದು ಸ್ವಭಾವದವಳು ಅಂತ ಅಂದ್ಕೋಂಡಿದ್ದೆ ಅಷ್ಟು ಜೋರಿದ್ದಾಳಾ” ಅಂತ ಕೇಳಿದ್ರು. ಆಗ ಕಮಲಮ್ಮನೋರು “ಅಯ್ಯೋ ಹೊರಗಿನವರ ಹತ್ರ ಬೆಣ್ಣೆ ತರ, ಮನೆಲಿ ನಮ್ಮ ಎದುರಿಗೆ ಕಂಡಿದ್ದು ಹೇಳಿದ್ರೆ ಅವತಾರ ಬರೋದು. ನೋಡ್ರಿ ಸುಶೀಲಮ್ಮ ನಾವ್ ಮೊದ್ಲಿಂದನು ಸಂಪ್ರದಾಯಸ್ಥರು. ನಮ್ ಯಜಮಾನ್ರಂತು ಈರುಳ್ಳಿ-ಬೆಳ್ಳುಳ್ಳಿನು ತಿಂದವ್ರಲ್ಲ. ಈಗ್ ನಮ್ ಗ್ರಹಚಾರಕ್ಕೆ ಮೊಟ್ಟೆ ಬೇಯಿಸಿದ ಪಾತ್ರೆಲಿ ನಾವು ಬೇಯ್ಸಗೊಳ್ಳೊ ಪರಿಸ್ಥಿತಿ ಬಂದಿದೆ. ಇವ್ಳು ಸಂಪ್ರಧಾಯಸ್ಥರ ಮನೆಲೆ ಹುಟ್ಟಿ-ಬೆಳೆದಿದ್ದು. ಇವ್ಳು ಮೊಟ್ಟೆ ತಿಂದ್ ಬೆಳ್ದಿದ್ದಾ…ಈಗ್  ತನ್ನ ಮಕ್ಕಳಿಗೆ ಮೊಟ್ಟೆ ಬೆಯಿಸಿ ಕೊಡ್ತಾಳೆ. ಏನಾದ್ರು ಹೇಳೋಕ್ ಕೊದ್ರೆ ಮುಗಿತು ಮನೆ ರಣರಂಗ. ಬೇಕಿದ್ರೆ ಇರಿ, ಇಲ್ಲ ಅಂದ್ರೆ ಹೋಗಿ ಅನ್ನೋ ರೀತಿಲಿ ಮಾತಾಡೊಳು.  ಈ ವಯಸ್ಸಲ್ಲಿ ಎಲ್ಲಿ ಹೋಗೋದು.ಹೇಳಿದ್ರೆ ಮಗನಿಗೂ ಕಷ್ಟ.  ಉಗುಳೊಕು ಆಗದೆ ನುಂಗೊಕು ಆಗದೆ ನೋಡಿದ್ರು ನೋಡ್ದೆ ಇರೋ ತರ ಬಾಯ್ ಮುಚ್ಗೊಂಡು ಇದೀವಿ” ಅಂತ ತಮ್ಮ ದುಖಃ ಹೇಳಿಕೊಂಡರು.
ಇವರ ಮಾತನ್ನು ಕೇಳಿಸಿಗೊಳ್ಳುತ್ತಿರೋ ಸುಶೀಲಮ್ಮ ನಿಟ್ಟುಸಿರು ಬಿಡುತ್ತ, “ನಮ್ದು ಹೇಳಿ-ಕೇಳಿ ಪುರೋಹಿತ್ ಮಾಡಿದ್ ಕುಟುಂಬ. ಈಗ್ ನಾನು ಇಲ್ಲ್ ಬಂದ್ ಏನೇನ್ ಕಾಣ್ ಬೇಕೋ ಅನ್ನಿಸಿ ಬಿಟ್ಟಿದೆ. ನಮ್ಮನೆಲು ಇವಳು ಮೊಟ್ಟೆ ತಂದು ದೋಸೆ ಮಾಡ್ತಾಳೆ. ಅದೇನೋ ಸುಡಗಾಡ್ ಆಮ್ಲೇಟ್ ಏನೋ ಅಂತ ನಮ್ ನಿಖಿಲ್ ಹೇಳ್ತಾ ಇರ್ತಾನೆ. ಆ ಮೊಟ್ಟೆ ಬೆಯಿಸಿದ್ ದೋಸೆ ತವಾದಲ್ಲಿ ನಾನ್ ದೋಸೆ ಮಾಡ್ಕೊಳ್ ಬೇಕು. ನನ್ ಮಗ ಒಬ್ಬನೆ ಇದ್ದಾಗ ಸಮಾಧಾನದಲ್ಲಿ ಹೇಳ್ದೆ, ಅವ್ನು ಬಿಡಮ್ಮ ಈಗ ಮೊಟ್ಟೆ ಎಲ್ಲರು ತಿಂತಾರೆ. ನಿನ್ಗೆ ಬೇಡ ಅಂದ್ರೆ ತಿನ್ ಬೇಡ ಅಂತ ಹೆಂಡ್ತಿ ಪರನೆ ಮಾತಾಡ್ ಬಿಟ್ಟ” ಅಂತ ಮಗನ ಮೇಲು ಅಸಮಾಧಾನ ತೋರಿಸಿದರು.
ಆಗ ಕಮಲಮ್ಮ, ಸುಶೀಲಮ್ಮನಿಗೆ ಸಮಾಧಾನ ಮಾಡೋ ತರ, “ಸದ್ಯ ನಿಮ್ ಮಗ ಏನು ರೇಗದೆ ಸಮಾಧಾನದಲ್ಲಿ ಹೇಳಿದ. ಈಗ ಒಂದ್ ವಾರದ ಹಿಂದೆ ನಮ್ಮ ಯಜಮಾನ್ರು ನನ್ನ ಹತ್ತಿರ ಹೇಳಿದ್ರು, ಮೊಳ್ಕಾಲ್ ವರೆಗೆ ಬರೋ ಪ್ಯಾಂಟ್ ಹಾಕೋದ್ರ ಬದ್ಲು ಸೀರೆ ಅಂತು ಉಡಲ್ಲ. ಕೊನೆಪಕ್ಷ  ಲಕ್ಷಣವಾಗಿ ಮೈ ಮುಚ್ಚೊ ಚೂಡಿದಾರ ಆದ್ರು ಹಾಕ್ಲಿ ಅಂತ. ನಾನು ಇದನ್ ನನ್ ಮಗನಿಗೆ ಹೇಳಿದೆ, ಇವನು ನನ್ ಮೇಲೆ ಸಿಡಿ-ಸಿಡಿ ಮಾಡಿದ. ಈಗ್ ಸಿಟಿನಲ್ಲಿ ಈ ತರ ಡ್ರೇಸ್ ಮಾಡೊದ್ ಸಹಜ. ನೀವ್ ಸುಮ್ನೆ ಅವಳ್ ಬಟ್ಟೆ-ಬರೆ ವಿಷಯಕ್ಕೆ ಏನು ಹೇಳೊಕ್ ಹೋಗ್ಬೇಡಿ. ಅವ್ರ-ಅವ್ರಿಗೆ ಬೇಕಾದ ಹಾಗೆ ಡ್ರೇಸ್ ಮಾಡ್ಕೊಳ್ತಾರೆ.  ನನ್ಗೆ ಇರೋ ಅಫೀಸ್ ಟೆನ್ಶನ್ ಜೊತೆ ಇನ್ನು ಏನಾದ್ರು ತಲೆನೋವ್ ತರ್ಬೇಡಿ ಅಂತ ಕಡ್ಡಿ ಮುರಿದ ಹಾಗ್ ಹೇಳಿದ. ನೋಡ್ರಿ ಸುಶೀಲಮ್ಮ, ಅಪ್ಪ-ಅಮ್ಮ ಕಲ್ಸಿ ದೊಡ್ಡ್ ಮಾಡೊ ತನ್ಕ. ಆಮೇಲ್ ರೆಕ್ಕೆ ಬಲಿತ ಹಕ್ಕಿ ಹಾಗೆ. ಏನ್ ಹೇಳೋ ಹಾಗೆ ಇಲ್ಲ. ನಮ್ಮ್ ನಮ್ಮ್ ಪಾಡಿಗೆ ನಾವ್ ಇದ್ರೆ ಆಯ್ತು” ಅಂತ ಹೇಳಿದರು.
ಆಗ ಸುಶೀಲಮ್ಮ ಅದು ಸರಿ ಅನ್ನಿ, “ಈಗಿನ್ ಕಾಲದವ್ರು ಅವ್ರಿಗೆ ಬೇಕಾದ ಹಾಗೆ ಇರ್ತಾರೆ. ನಮ್ ತರ ಮಡಿ ಮೈಲಿಗೆ ಏನು ಕೇಳ್ ಬೇಡಿ. ಕೂದಲು ಶುಕ್ರವಾರ ಬೇಕಾದ್ರೆ ಆಗ್ಲಿ, ಮಂಗಳವಾರ ಬೇಕಿದ್ರೆ ಆಗ್ಲಿ,  ಯಾವಾಗ ಅಂದ್ರೆ ಯಾವಾಗ ಕಟ್ ಮಾಡ್ಸಗೊಳ್ತಾರೆ, ಚಿನ್ನ ನ್ನೆಲ್ಲ ಬ್ಯಾಂಕ್ ನಲ್ಲಿ ಇಟ್ಟು ಕಪ್ಪು ತಗಡು ಗಳನ್ನಾ ಕಿವಿಗೆ ಕುತ್ತಿಗೆಗೆ ಹಾಕೋದು. ಹಣೆಗೆ ಬೊಟ್ಟು ಇಟ್ಟಿದ್ದು ನಾ ಕಾಣೆ.  ಅದ್ ಏನ್ ಪ್ಯಾಶನ್ ನೋ ಏನ್ ಚಂದನೋ. ಮುತೈದೆ ತನದ ಮಹತ್ವ ಗೊತ್ತಿದ್ರೆ ತಾನೆ. ಇನ್ನು ಏನ್-ಏನ್ ಕಾಣ್ಬೇಕೊ ಆ ದೇವ್ರಿಗೆ ಗೊತ್ತು” ಅಂತ ಹೇಳಿದರು.
ಆಗ ಕಮಲಮ್ಮ ,”ಹೋಗ್ಲಿ ಬಿಡಿ. ಈಗ್ ಇದು ಎಲ್ಲರ ಮನೆ ಕಥೆ ಆಗಿದೆ. ಸದ್ಯ ಮೂರ್ ಹೊತ್ತು ಊಟ ಕೊಟ್ಟು ಮನೆಲಿ ಮೊಮ್ಮಕ್ಕಳ ಜೊತೆ ಇರೋ ಬಾಗ್ಯ ಆದ್ರು ಇದೆ ಅಂತ ಸಮಧಾನ ಮಾಡ್ಕೊಳ್ ಬೇಕು” ಅಂತ ಹೇಳಿದರು.
ಆಗ ಸುಶೀಲಮ್ಮ,” ನೀವ್ ಹೇಳೋದು ಸರಿ. ಇಲ್ಲ ಅಂದ್ರೆ ಈ ವಯಸ್ಸಲ್ಲಿ ಒಬ್ಬರೆ ಬೇಯಿಸಿಗೊಂಡು ತಿನ್ನೋ ಹಾಗು ಇಲ್ಲ ಬಿಡೊ ಹಾಗು ಇಲ್ಲ. ಏನೋ ಇಷ್ಟೆ ಗಟ್ಟಿ ಇದ್ದಾಗ್ಲೆ ದೇವ್ರು ಕರ್ಕೋಂಡು ಹೋಗ್ಲಿ ಅಂತ ಹೇಳ್ ಕೊಳ್ತೀನಿ. ಪರಸೇವೆ ಆಗಿ ಅವರಿಗೆ ಹೊರೆ ಆಗ್ದೆ ಇದ್ರೆ ಸಾಕು.” ಅಂತ ಹೇಳಿದರು.
ಆಗ ಕಮಲಮ್ಮನು ಹೌದು ಅನ್ನೊ ತರ ನಿಟ್ಟುಸಿರು ಬಿಟ್ಟರು. ಇಷ್ಟು ದಿನ ಏನೆ ಮಾತಾಡಿದರು ಇಷ್ಟು ಮನಸ್ಸು ಬಿಚ್ಚಿ ಮಾತಾಡಲಿಲ್ಲವಾಗಿತ್ತು. ಇಂದು ಮನಸ್ಸು ಬಿಚ್ಚಿ ತಮ್ಮ ಕಾಲದಿಂದ ಈಗಿನ ಕಾಲಕ್ಕೆ ಹೊಂದಿಕೊಳ್ಳುವ ಕಷ್ಟವನ್ನು ಹಂಚಿಕೊಂಡರು. ದಿನವು ಇಬ್ಬರಿಗೂ ಸ್ವಲ್ಪ ಹೊತ್ತು ಜೊತೆಯಾಗಿ ಮಾತಡಿ ಸ್ವಲ್ಪ ಸಮಯ  ಕಳೆಯುವ ವಾಡಿಕೆ ಇದರಿಂದ ಇಬ್ಬರಿಗೂ ನೆಮ್ಮದಿ ಸಿಗುತಿತ್ತು.

Thursday, March 14, 2019

ತಪ್ಪಿದ ಅವಘಡ


                                              ತಪ್ಪಿದ ಅವಘಡ

ಬೆಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಗದ್ದೆನೆ ಕ್ರಿಕೆಟ್ ಮೈದಾನ.  ಒಮ್ಮೆ ಹೀಗೆ ಮಕ್ಕಳೆಲ್ಲ ಸೇರಿ ಕ್ರಿಕೆಟ್ ಆಡುತ್ತಾ ಇದ್ದರು. ಬಾಲ್ ಹೇಗೋ  ಅಲ್ಲೆ ಪಕ್ಕದಲ್ಲೆ ಹಾದು ಹೋಗುವ ರೈಲ್ವೆ ಹಳಿಯ ಬಳಿ ಹೋಯಿತು. ಬಾಲ್ ತಗೋಂಡ್ ಬರೋಕ್ ಹೋದ ರವಿಗೆ ರೈಲ್ವೆ ಹಳಿ ಬಿರುಕು ಬಂದದ್ದು ಕಾಣಿಸಿತು. ಅದನ್ನು ನೋಡಿದ ರವಿ ತನ್ನ ಬಾಕಿ ಗೆಳೆಯರನ್ನು ಉದ್ರೇಕದಲ್ಲಿ ಕರೆದ. ಎಲ್ಲರು ಆಶ್ಚರ್ಯದಿಂದ ಏನಾಗಿರ ಬೇಕು ಎಂದು ಅಲ್ಲಿಗೆ ಓಡಿ ಬಂದರು. ಅಲ್ಲಿ ರೈಲು ಹಳಿಯ ಜೋಡಣೆ ಕಳಚಿತ್ತು. ಇದನ್ನು ನೋಡಿ  ಈ ಹಳಿಯಲ್ಲಿ ರೈಲು ಬಂದರೆ ಅಪಘಾತ ಆಗುವುದು ಎಂದು ಮಾತಾಡುಕೊಂಡರು. ಸುಮಾರು ತಾವು ಶಾಲೆಯಿಂದ ಬರೋ ವೆಳೆಗೆ ರೈಲು ಬರೋದು ದಿನ ನೋಡುತ್ತಿದ್ದರು. ಇನ್ನೇನು ರೈಲು ಬರೋ ಸಮಯವಾಯಿತು,ಹೇಗಾದರು ಮಾಡಿ ಈ ಅವಘಡ ತಪ್ಪಿಸ ಬೇಕು ಎಂದು ಎಲ್ಲರು ಮಾತಾಡಿಕೊಂಡರು. ಹೀಗೆ ಯೋಚಿಸುತ್ತಿದ್ದಾಗ ಒಬ್ಬ ಹುಡುಗನಿಗೆ ಅಲ್ಲೆ ಐಸ್ ಕ್ರೀಮ್ ಮಾರುವ ರಾಮು ಚಾಚ ಕಂಡನು. ಅವನು ತಲೆಗೆ ಕೆಂಪು ರುಮಾಲು ಸುತ್ತಿದ್ದನು. ಆ ಹುಡುಗ ತನ್ನ ಬೇರೆ ಸ್ನೇಹಿತರಿಗೆ ಅವನ ರುಮಾಲನ್ನು ಒಂದು ಕೋಲಿಗೆ ಕಟ್ಟಿ ಅದನ್ನು ರೈಲು ಬರೋ ಮುಂಚೆ ತೋರಿಸುವುದು. ತಮ್ಮ ಶಾಲೆಯ ಪಾಠದಲ್ಲಿ ಹೀಗೆ ಕೆಂಪು ಬಟ್ಟೆ ತೋರಿಸಿದರೆ ರೈಲು ಚಾಲಕನಿಗೆ ರೈಲು ನಿಲ್ಲಿಸುವ ಸೂಚನೆ ಸಿಕ್ಕಿದ ಹಾಗೆ ಎಂದು ಓದಿದ್ದು ನೆನಪು. ಎಲ್ಲರಿಗೂ ಇದು ಸರಿ ಎಂದೆನಿಸಿ ರಾಮು ಚಾಚನ ಬಳಿ ಹೋದರು. ಅಲ್ಲಿ ಒಬ್ಬ ಹುಡುಗ , ರಾಮು ಚಾಚಾ ನೀವ್ ಇವತ್ತು  ನಮ್ಗೆ ನಿಮ್ ತಲೆಗೆ ಕಟ್ಟಿದ ಆ ಕೆಂಪು ಟುವಾಲ್ ಕೊಡ್ತಿರಾ, ನಾವ್ ಆಮೇಲ್ ನಿಮ್ಗೆ ಬಂದ್ ಕೊಡ್ತೀವಿ”  ಅಂತ ಹೇಳಿದ. ಇವನ ಮಾತಿಗೆ ರಾಮು ಚಾಚಾನಿಗೆ ರೇಗಿ ಹೋಯಿತು. ಆತ ಮಕ್ಕಳಿಗೆ, “ಏನ್ರೋ ಇಷ್ಟು ದಿನ ಖಾಸ್ ಇಲ್ಲದೆ ಐಸ್ ಕ್ರೀಮ್ ಕೇಳ್ತಿದ್ರಿ. ಇವತ್ತು ನನ್ನ ರುಮಾಲ್ ಮೇಲ್ ಕಣ್ಣ್ ಬಿತ್ತೆನ್ರೋ….? ಮೊದ್ಲು ನಡಿರಿ ಇಲ್ಲಿಂದ. ಇಲ್ಲ ಅಂದ್ರೆ ನಿಮ್ ಮಾಸ್ತರ್ ಗೆ ಪೋನ್ ಮಾಡ್ತೀನಿ ನೋಡಿ. ಮುಂದ್ ಸ್ಕೂಲ್ ಶುರು ಆದಾಗ ನಿಮ್ ಗ್ರಾಚಾರ ಬಿಡ್ಸ್ ಬೇಕು” ಅಂದನು. ಆಗ ಮಕ್ಕಳೆಲ್ಲ ಸಪ್ಪೆ ಮುಖ ಮಾಡಿಕೊಂಡರು. ಅದರಲ್ಲಿ ಒಬ್ಬ, “ಇಲ್ಲ ರಾಮು ಚಾಚಾ ನಾವೆನ್ ಬೇಕಂತನೆ ನಿಮ್ ಟುವಾಲ್ ಕೇಳ್ತಾ ಇಲ್ಲ. ಅದೆನ್ ಆಯ್ತು ಅಂದ್ರೆ….” ಇದ್ದ ವಿಷಯ ಹೇಳಿದ. ಆಗ ರಾಮು ಚಾಚಾನಿಗೆ  ಮಕ್ಕಳ ಮಾತು ಸರಿ ಏನಿಸಿತು. ನೂರಾರು ಪ್ರಯಾಣಿಕರು ಖುಶಿಯಿಂದ ತಮ್ಮ ತಮ್ಮ ಊರಿಗೆ ಹೋಗುವಾಗ ಏನು ಅವಘಡ ಆಗ ಬಾರದು ಎಂದು ತನ್ನ ಕೆಂಪು ರುಮಾಲನ್ನು ಮಕ್ಕಳಿಗೆ ಕೊಟ್ಟ. ಮಕ್ಕಳು ಅಲ್ಲೆ ಒಂದು ಕೋಲಿಗೆ ಕಟ್ಟಿ ಬಿರಿದ ಹಳಿಗಿಂತ ಮುಂದೆ ಹೋಗಿ ಕೋಲನ್ನು ಹಿಡಿದರು. ಅದು ಅಲ್ಲದೆ ರಾಮು ಚಾಚಾ ತನ್ನ ಮೊಬೈಲ್ ನಿಂದ ತನ್ನ ಪರಿಚಯದ ರೈಲ್ವೆ ನಿರ್ವಾಹಕನಿಗೆ ಪೋನ್ ಮಾಡಿ ತಿಳಿಸಿದ. ಅವರು ತಕ್ಷಣ ಅಲ್ಲಿಗೆ ಬಂದು ಕಂಬಿಯನ್ನು ರಿಪೇರಿ ಮಾಡಿದರು. ತಪ್ಪಿದ ಅನಾಹುತಕ್ಕೆ ಮಕ್ಕಳಿಗೆ ಎಲ್ಲರಿಂದ ಶಭಾಶ್ ಗಿರಿ ಸಿಕ್ಕಿತು. ರಾಮು ಚಾಚಾ ಖಾಸಿಲ್ಲದೆ ಮಕ್ಕಳಿಗೆ ಐಸ್ ಕ್ರೀಮ್ ಕೊಟ್ಟ,

Tuesday, March 12, 2019

ಪುಟ ತಿರುವಿದಾಗ...


                                                  ಪುಟ ತಿರುವಿದಾಗ….. 

ಶ್ರೀನಿವಾಸ ರಾಯರದ್ದು ದೊಡ್ಡ ಮನೆತನ. ಮೊದಲಿನಿಂದಲು ಶ್ರೀಮಂತಿಕೆ ನೋಡಿದವರು. ಅದಕ್ಕನುಗುಣವಾಗಿ ಗರ್ವ, ದರ್ಪ, ಅವರಿಗೆ ಮನೆತನದಿಂದ ಬಂದ ಬಳುವಳಿಯಾಗಿತ್ತು. ಎರಡು ಹೆಣ್ಣು ಮಕ್ಕಳ ನಂತರ ಸುಬ್ರಮಣ್ಯ ಸ್ವಾಮಿಯ ಹರಕೆ ಹೊತ್ತು ಹುಟ್ಟಿದವನೆ ಸುಬ್ರಮಣ್ಯ. ಅಕ್ಕಂದಿರ ಪ್ರೀತಿಯ ತಮ್ಮ, ಸಾವಿತ್ರಮ್ಮನ ಪ್ರೀತಿಯ ಮಗ. ತಂದೆಯ ಹೆಮ್ಮೆಯ ತಮ್ಮ ಮನೆ ನಡೆಸುಕೊಂಡು ಹೋಗುವ ವಾರಸ್ತುದಾರ. ಶ್ರೀನಿವಾಸರ ತಾಯಿ ಮೊಮ್ಮಗನನ್ನು ಅಪ್ಪಟ ಬಂಗಾರದಂತೆ ಕಾಣುತ್ತಿದ್ದಳು.
ಎಲ್ಲರ ಪ್ರೀತಿ ವಾತ್ಸಲ್ಯದಿಂದ  ಬೆಳೆದ ಸುಬ್ರಮಣ್ಯ ಪಕ್ಕ ಅಮ್ಮನ ಮಗನಾಗಿ ಸಾವಿತ್ರಮ್ಮನ ಗುಣವನ್ನೆ ಮೈ ಗೂಡಿಸಿಗೊಂಡ. ಮೊದ-ಮೊದಲು ಶಾಲೆಗೆ ಹೋಗಲು ಹಿಂದೇಟು ಹಾಕ್ತಾ ಇದ್ದ. ಅಮ್ಮನ ಹತ್ತಿರ ಹೋಗಿ ಅಡಗಿಕೊಳ್ಳುತ್ತಿದ್ದ. ಆಗ ಅವನ ಅಜ್ಜಿ,” ಈ ಮನೆಗೆ ಅವನೊಬ್ಬನೆ ಮಗ ಅವನಿಗೇಕೆ ಓದು? ವ್ಯವಹಾರ ಮಾಡುವಷ್ಟು ಜ್ಞಾನ ಇದ್ದರೆ ಸಾಕು” ಎಂದು ಹೇಳುತ್ತಿದ್ದರು. ಅಪ್ಪ-ಅಮ್ಮನು ಮಗನೇನು ನೌಕರಿ ಮಾಡಬೇಕೆಂದಿಲ್ಲ ಇರೋ ಆಸ್ತಿ ನೋಡಿಕೊಂಡರೆ ಸಾಕು ಎಂದು ಹೇಳುತ್ತಿದ್ದರು. ಇವೆಲ್ಲದರ ಪರಿಣಾಮ ಸುಬ್ರಮಣ್ಯ ಓದಿನ ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕಿದ. ಅಕ್ಕಂದಿರ ಜೊತೆ ಹೇಗೊ ಹತ್ತನೆ ತರಗತಿಯ ವರೆಗೆ ಓದಿದ. ಕಾಲೇಜ್ ಗೆ ಬೇರೆ ಊರಿಗೆ ಮಗನ ಕಳಿಸಿಕೊಡುವ ಮನಸ್ಸು ಅಪ್ಪ-ಅಮ್ಮನಿಗೂ ಇಲ್ಲವಾಗಿತ್ತು. ಸುಬ್ರಮಣ್ಯನಿಗೂ ಇಲ್ಲವಾಗಿತ್ತು. ಕೃಷಿಯಲ್ಲಿ ಮಾತ್ರ ಆಸಕ್ತಿ ಇತ್ತು.  ತಮ್ಮ ಎರಡು ಹೆಣ್ಣು ಮಕ್ಕಳನ್ನು ಸಣ್ಣ ವಯಸ್ಸಿಗೆ ಒಳ್ಳೆ ಕಡೆ ಮದುವೆ ಮಾಡಿ ಸೇರಿಸಿದ್ದರು. ಅವರು ಅಮ್ಮನ ತರವೆ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡಿದ್ದರು.  ಇತ್ತ ಮಗನು ತಮ್ಮ ತೋಟದ ಬೆಸಾಯದಲ್ಲಿ ತೊಡಗಿಕೊಂಡ. ಹೊಸ ಹೊಸ ಕೃಷಿಯ ಬಗ್ಗೆ ತಿಳಿದುಕೊಂಡು ಬೆಸಾಯ ಜಾನುವಾರುಗಳು ಹೀಗೆ ಹಳ್ಳಿ ಜೀವನಕ್ಕೆ ತನ್ನನ್ನು ತೊಡಗಿಸಿಕೊಂಡ. ಕೃಷಿ ಮತ್ತು ಮನೆ ಮಾಡಿಕೊಂಡು ಹೋಗುವುದರಲ್ಲಿ ಅವನಿಗೆ ಖುಶಿ ಇತ್ತು. ವಿದ್ಯೆ ಕೈ ಕೊಟ್ಟರು ಭೂಮಿ ತಾಯಿ ಅವನ ಕೈ ಬಿಡಲಿಲ್ಲ. ಇವನು ಅದನ್ನೆ ನಂಬಿ ಇದ್ದ. ಯವುದು ಅಡ್ಡ ಚಟ ಇಲ್ಲದೆ ಅಮ್ಮನ ಮುದ್ದುನ ಮಗನಾಗಿ ಇದ್ದ. ಇದು ಅಪ್ಪ-ಅಮ್ಮನಿಗೂ ತುಂಬಾ ಖುಶಿಯಾಗಿತ್ತು. ಸಾವಿತ್ರಮ್ಮ ಕೆಲವೊಮ್ಮೆ ಹೇಳ್ತಾ ಇದ್ದರು..”ನಿಮ್ಮ ಅಜ್ಜಿ ಇದ್ದರೆ ನಿನ್ನ ಕಣ್ಣಲ್ಲಿ ಹಾಕಿ ಮುಚ್ಚ್ ಗೊಳ್ಳ್ ತಾ ಇದ್ದರು” ಅಂತ. ತಮ್ಮ ಹೆಣ್ಣು ಮಕ್ಕಳನ್ನು ತಮಗೆ ಸಮನಾದ ಸಂಭಂದವನ್ನು ಮಾಡಿದ ಹಾಗೆ ಮಗನಿಗೂ ಒಳ್ಳೆ ಕಡೆಯಿಂದ ಹೆಣ್ಣು ತರುವ ಯೋಚನೆ ಮಾಡಿದರು. ಇರೋ ಒಂದೇ ಮಗನ ಮದುವೆ ಚನ್ನಾಗಿ ಮಾಡಿ ಮೊಮ್ಮಕ್ಕಳನ್ನು ನೋಡುವ ಆಸೆ. ಮದುವೆ ವಯಸ್ಸಿಗೆ ಬಂದ ಸುಬ್ರಮಣ್ಯ ಕೂಡ ಮದುವೆಗೆ ಏನು ಅಡ್ಡಿ ಮಾಡಲಿಲ್ಲ. ಸಾವಿತ್ರಮ್ಮನಿಗೆ ಸಡಗರ. ಹೆಣ್ಣು ಮಕ್ಕಳ ಮದುವೆ ಆದ ಮೇಲೆ ಮನೆ ಎಕೋ ಬಣ-ಬಣ ಅನ್ನಿಸುತಿತ್ತು. ಸೊಸೆಯನ್ನು ಅಪ್ಪಟ ಮಗಳಂತೆ ನೋಡಿಕೊಳ್ಳುವ ಅತ್ತೆ, ಚಿನ್ನದಂತ ಮಗ. ರಾಯರು ಬೇರೆಯವರ ಹತ್ತಿರ ಎಷ್ಟೇ ದರ್ಪ ತೋರಿಸಿದರು ಮನೆಗೆ ಬಂದ ಸೊಸೆಗೆ ಯಾವ ಕಷ್ಟ ಕೊಡುವ ಮನುಷ್ಯನಲ್ಲ. ತಮ್ಮ ದೊಡ್ಡಸ್ತಿಕೆ ಪ್ರದರ್ಶನಕ್ಕೆಂದೆ ಸೊಸೆಗೆ ಬೇಕಾದಷ್ಟು ಬಂಗಾರ ಮಾಡಿಸುವವರು. ಒಟ್ಟಿನಲ್ಲಿ ತಮ್ಮ ಮನೆಗೆ ಜಾತಕ ಕೊಡಲು ಜನ ತಾ ಮುಂದು ಅಂತ ಬರ್ತಾರೆ ಅಂತ  ರಾಯರ ಮತ್ತು ಇವರ ಹೆಂಡತಿಯ ಲೆಕ್ಕಚಾರ. ಸುಬ್ರಮಣ್ಯ ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಕೆಲಸದಲ್ಲಿ ತೊಡಗಿದ್ದ.
ಸಾವಿತ್ರಮ್ಮ ತಮ್ಮ ಮಗನ ಮದುವೆ ಮಾಡುವ ವಿಚಾರವನ್ನು ತಮ್ಮ ನೆಂಟರಿಷ್ಟರಲ್ಲಿ ಹಾಗೆ ಪರಿಚಯದವರಲ್ಲಿ ಹೇಳಿದರು. ಎಲ್ಲರ ಬಳಿಯು ,”ಒಳ್ಳೆ ಹುಡುಗಿ ತಮ್ಮ ಮನೆಗೆ ಹೊಂದಿಕೊಂಡು ಮನೆ ಮಾಡಿಕೊಂಡು ಹೋಗುವ ಹುಡುಗಿ ಇದ್ದರೆ ಸಾಕು” ಎನ್ನುತ್ತಿದ್ದರು. ತಮ್ಮ ಮಗನಿಗೆ ಇನ್ನೆಷ್ಟು ಹುಡುಗಿಯರ ಜಾತಕ ಬರುವುದೊ ಎಂದು ಎಣಿಸಿದ ರಾಯರಿಗೆ ಮತ್ತು ಸಾವಿತ್ರಮ್ಮನಿಗೆ ಸ್ವಲ್ಪ ನಿರಾಶೆ ಆಯಿತು. ಸುಬ್ರಮಣ್ಯ ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಕೃಷಿಯಲ್ಲಿ ತೊಡಗಿದ. ಮೊದಲಿನಿಂದಲು ಅಮ್ಮ-ಅಕ್ಕಂದಿರ ಜೊತೆ ಮುದ್ದಾಗಿ ಬೆಳೆದ ಸುಬ್ರಮಣ್ಯ ಸಂಕೋಚ ಸ್ವಭಾವದವನು. ವಯಸ್ಸಿಗೆ ತಕ್ಕ ಆಕರ್ಷಣೆ ಹೊರತು ಯಾವಾಗಲು ಯಾವ ಹುಡುಗಿಯರ ಹಿಂದೆ ಹೋದವನಲ್ಲ. ಹೆಣ್ಣು ಮಕ್ಕಳ ಭಾಷೆಯಲ್ಲಿ ಹೇಳೊದಾದರೆ ಜೊಲ್ಲು ಪಾರ್ಟಿ ಅಲ್ಲ.
ಸಾವಿತ್ರಮ್ಮನವರಿಗೆ ನಿರಾಶೆ ಜೊತೆ ಹೆದರಿಕೆ ಶುರುವಾಯಿತು. ನಮ್ಮ ಸಮಾಜದ ಹೆಣ್ಣು ಮಕ್ಕಳ ಕೊರತೆ ಮತ್ತು ಮನೆಯಲ್ಲಿ ಇರೋ ಗಂಡು ಮಕ್ಕಳ ಒಪ್ಪದೆ ನೌಕರಿ ಮತ್ತು ಶಹರದ ಆಸೆ ಪಡುವುದನ್ನು ಅವಳ ಗಮನಕ್ಕೆ ಬಂತು.   ಹಳ್ಳಿಯಲ್ಲಿ ಇರೋ ಗಂಡು ಮಕ್ಕಳ ಮದುವೆ ಆಗ್ದೆ ಇರೋ ದನ್ನು ಗಮನಿಸಿದ್ದಳು. ಆದರೆ ತಮ್ಮ ಮನೆಗೆ ಆ ಸಮಸ್ಯೆ ಬರುವುದಿಲ್ಲ ಎಂದು ಎಣಿಸಿದ್ದಳು. ಆದರೆ ಅವರ ಲೆಕ್ಕಚಾರ ತಲೆ ಕೆಳಗಾಯಿತು. ತನ್ನ ಮನಸ್ಸಿನಲ್ಲಿನ ಹೆದರಿಕೆಯನ್ನು ತೊರಿಸಿಕೊಳ್ಳದೆ ಎಲ್ಲರ ಹತ್ತಿರ “ ನಮ್ಮ ಮನೆಗೆ ಸೊಸೆ ಆಗಿ ಬರುವವಳು ಅದೃಷ್ಟ ಮಾಡಿರ ಬೇಕು. ಎಲ್ಲಿದ್ದಾಳೊ ಏನೋ? “ ಎನ್ನುತ್ತಿದ್ದರು. ಹೀಗೆ ತನ್ನ ಮನೆಯ ಹಾಗೂ ಮಗನ ಗುಣಗಾನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ನೌಕರಿ ಮತ್ತು ಶಹರದ ಜೀವನದ ಬಗ್ಗೆ ಏನಾದರು ಕೊಂಕು ಹೇಳಿತ್ತಿದ್ದಳು. ಊರಲ್ಲಿ ಅನುಕೂಲಸ್ಥರ ಮನೆಗೆ ಮಗಳನ್ನು ಕೊಟ್ಟರೆ ಸುಖದಿಂದ ಇರ್ತಾರೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ಹೆಣ್ಣು ಮಕ್ಕಳ ಅಮ್ಮಂದಿರ ಮುಂದೆ ಹೇಳುತ್ತಿದ್ದರು.ಆದರೆ  ಶ್ರೀನಿವಾಸ ರಾಯರು ಮಾತ್ರ ಅಪ್ಪಿ ತಪ್ಪಿಯು ಯಾರ ಹತ್ತಿರವೂ ತಮ್ಮ ಮಗನಿಗೆ ಜಾತಕ ಬರ್ತಾ ಇಲ್ಲ ಅಂತ ಎಲ್ಲೂ ಹೇಳಲಿಲ್ಲ. ಎಲ್ಲು ತಮ್ಮ ದೊಡ್ಡಸ್ಥಿಕೆಗೆ ಕುಂದು ಬರದ ಹಾಗೆ, “ಯಾಕೋ ಒಂದು ಜಾತಕವು ಕೂಡ್ ಬರ್ತಾ ಇಲ್ಲ. ಅದು ಅಲ್ದೆ ನಮ್ಮ ಮಗನಿಗೆನು  ತುಂಬಾ ವರ್ಷ ಆಗಿಲ್ಲ. ಸರಿಯಾದ ಹುಡುಗಿ ಸಿಗಲಿ. ಏನೋ ಮುಂದಿನ ವರುಷ ಗುರು ಬಲ ಚನ್ನಾಗಿ ಇದಿಯಂತೆ”, ಅಂತ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಏನೆ ಹೇಳಿದರು ರಾಯರಿಗೆ ಮಗನ ಮದುವೆ ಚಿಂತೆ ಒಳ-ಒಳಗೆ ಇತ್ತು. ಸಾವಿತ್ರಮ್ಮನೋ ದಿನ ಮಗನ ಮದುವೆ ವಿಚಾರ ಹೇಳಿ-ಹೇಳಿ ಗಂಡನಿಗೆ ಇನ್ನು ತಲೆ ಚಿಟ್ಟು ಹಿಡಿಸುತ್ತಿದ್ದರು.  ಸುಬ್ರಮಣ್ಯ ಮಾತ್ರ ಯವುದನ್ನು ತಲೆ ಹೆಡಿಸಿಕೊಳ್ಳದೆ ಅಪ್ಪ- ಅಮ್ಮನಿಗೆ ಸಮಾಧಾನ ಹೇಳುತ್ತಿದ್ದ. ಅತ್ತ ಸುಬ್ರಮಣ್ಯನ ಅಕ್ಕಂದಿರು ತಮ್ಮನ ಮದುವೆಗೊಸ್ಕರ ತಮ್ಮ ಬಳಗದವರ ಹತ್ತಿರ ವಿಚರಿಸುತ್ತ ಇದ್ದರು. ಆದ್ರೆ ಯಾಕೋ ಕಂಕಣ ಬಲ ಕೂಡಿ ಬರಲೆ ಇಲ್ಲ.
ಒಮ್ಮೆ ರಾಯರು ತೋಟದಿಂದ ಮನೆಗೆ ಬರುವಾಗ ಅಲ್ಲೆ ಬಾವಿ ಕಟ್ಟೆಯ ಮೇಲೆ ಕುಳಿತರು. ಸ್ವಲ್ಪ ಸುಸ್ತಾಗಿತ್ತು. ಸುಮ್ಮನೆ ಯಾವೊದೋ ಯೋಚನೆಯಲ್ಲಿ ಮುಳುಗಿದರು. ಹೀಗೆ  ತಮ್ಮ ಗತ ಕಾಲದ ಜೀವನದ ಪುಟ ತುರುವಿದಾಗ…………………..
ಶ್ರೀನಿವಾಸ ರಾಯರು ಮೊದಲು ಮೋಜಿನ ಮನುಷ್ಯನಾಗಿದ್ದ. ಅವರ ಅಪ್ಪ ದೊಡ್ಡ ಪುರೊಹಿತರು ಮತ್ತು ಒಳ್ಳೆ ಜಮೀನು ಉಳ್ಳವರಾಗಿದ್ದರು. ಆರು ಜನ ಹೆಣ್ಣು ಮಕ್ಕಳ ನಂತರ ಹುಟ್ಟಿದ ಶ್ರೀನಿವಾಸನಿಗೆ ಸ್ವಲ್ಪ ಅತಿಯಾದ ಪ್ರೀತಿ ಸಿಗುತಿತ್ತು. ಮಗ ಏನ್ ಮಾಡಿದರು ಚಂದವೆ. ಮಗನಿಗೆ ಸ್ವಲ್ಪ ಸಲುಗೆ ಮತ್ತು ಸ್ವಾತಂತ್ರ ಇತ್ತು. ಇದೇ  ಅವರ ದರ್ಪಕ್ಕೆ ಮತ್ತು ಮೋಜಿಗೆ ಕಾರಣವಾಯಿತು. ಅದು ಅಲ್ಲದೆ ಶ್ರೀನಿವಾಸ ಯೌವನದಲ್ಲಿ ಹೆಣ್ಣು ಮಕ್ಕಳ ವಿಷಯದಲ್ಲಿ ಸಡಿಲವಾಗಿದ್ದರು. ಇದು ಸ್ವಲ್ಪ ಮಿತಿ ಮೀರಿತ್ತು. ಆದ್ರು ಯಾರು ಅವರ ಮನೆಯ ವಿಷಯ ಉಸಿರು ಬಿಡುತ್ತಿರಲ್ಲಿಲ್ಲ.
ಶ್ರೀನಿವಾಸ  ತೋಟದ ಕೆಲಸವನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ತಂದೆ ಪುರೋಹಿತ್ಯಕ್ಕೆ ಬೇರೆ ಊರಿಗೆ ಹೋದಾಗ ಚಿಕ್ಕ ವಯಸ್ಸಿನಲ್ಲೆ ಮನೆಯ ಯಜಮಾನಿಕೆ  ಮತ್ತು ಆಳುಗಳ ಹತ್ತಿರ ಕೆಲಸ ಹೇಳಿ ಕೆಲಸ ಮಾಡಿಸುವ  ತಾಕತ್ತು ಮತ್ತು ಬುದ್ದಿವಂತಿಕೆ ಇತ್ತು. ಇದು ಶ್ರೀನಿವಾಸರ ಅಪ್ಪ-ಅಮ್ಮನಿಗೆ ಹೆಮ್ಮೆಯ ವಿಷಯವಾಗಿತ್ತು. ತೋಟದ ಕೆಲಸಕ್ಕೆ ಆಳುಗಳು ಬರುವಾಗ ತಮ್ಮ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಕರೆದು ಕೊಂಡು ಬರುತ್ತಿದ್ದರು. ಆಗ ವಿದ್ಯೆಗೆ ಮಹತ್ವ ಇಲ್ಲ. ತಾವು ಮಾಡುವ ತೋಟದ ಕೆಲಸ ಕಲಿತು ಮುಂದೆ ಮದುವೆ ಆದ ಮೇಲೆ ಗಂಡನ ಮನೆಯಲ್ಲಿ ಅದು ಪ್ರಯೋಜನಕ್ಕೆ ಬರಲಿ ಎಂದು. ಆಗ ಬಂದವಳೆ ಗಂಗೆ. ಪ್ರಾಯಕ್ಕೆ ಬಂದ ಗಂಗೆ ತನ್ನ ತಾಯಿಯ ಜೊತೆ ಶ್ರೀನಿವಾಸರ ಮನೆಯ ತೋಟದ ಕೆಲಸಕ್ಕೆ ಬರುತ್ತಿದ್ದಳು. ವಯಸ್ಸಿಗೆ ತಕ್ಕ ಬೆಳವಣಿಗೆ, ಸ್ವಲ್ಪ ಎಣಗಪ್ಪಾದರು ಎದ್ದು ಕಾಣುವ ಅವಳ ಮೈ-ಮಾಟ, ಕಪ್ಪನೆಯ ಉದ್ದ ಜಡೆ, ಆಕರ್ಷಕ ಕಪ್ಪು ಬಟ್ಟಲು ಕಣ್ಣು. ಸ್ವಲ್ಪ ಹೆಂಗರಳಾದ ರಾಯರಿಗೆ ಗಂಗಿ ಯ ಮೇಲೆ ವಯಸ್ಸಿನ ಆಕರ್ಷಣೆ ಶುರುವಾಯಿತು. ಮೊದಮೊದಲು ಅವಳನ್ನು ನೀರು ಬಿಡಲು ಕರೆಯುವುದು, ಭತ್ತದ ಚೀಲ ಹಿಡಿಯಲು ಕರೆಯುವುದು, ಹೀಗೆ ಗಂಗಿ ಯನ್ನು ತಮ್ಮ ಸಾಮಿಪ್ಯಕ್ಕೆ ಕರೆದು ಅವಳ ಜೊತೆ ಸಲುಗೆಯಿಂದ ಮಾತಾಡುತ್ತಿದ್ದರು. ಪ್ರಾಯಕ್ಕೆ ಬಂದ ಗಂಗಿಯು ಯಜಮಾನರಲ್ಲಿ ಏನೋ ಸಲುಗೆ. ಇದು ಬೇರೆ ಕೆಲಸದವರಿಗೆ ತಿಳಿದ ವಿಷಯವೆಯಾಗಿತ್ತು. ಯಜಮಾನ ಕೆಲಸಕ್ಕೆ ಬಂದ ಹೆಂಗಸರ ಜೊತೆ ಸಂಭಂದ ಇಟ್ಟುಗೊಳ್ಳುವ ವಿಷಯ ವಿಶೇಷವೆನಲ್ಲ. ಇದು ಸಹಜವಾಗಿತ್ತು. ಯಜಮಾನನಿಂದ ಭೂವ್ಯಾಜ್ಯ , ಹಣಕಾಸು ಹೀಗೆ ಅನೇಕ ಸಹಾಯ ಪಡೆಯುತ್ತಿದ್ದರು. ಗಂಗೆ ಮತ್ತು ಶ್ರೀನಿವಾಸ ರಾಯರ ಮದ್ಯೆ ಗೆಳೆತನ ಬೆಳೆಯಿತು. ಅಷ್ಟರಲ್ಲೆ ಗಂಗಿಯ ತಾಯಿಗೆ ಆರೋಗ್ಯದ ಸಮಸ್ಯೆ ಶುರುವಾಯಿತು. ಇದಕ್ಕೆ ಗಂಗಿ ಯಜಮಾನರ ಮನೆಯಲ್ಲಿ ಹಣಕಾಸಿನ ಸಹಾಯ ಪಡೆದಳು. ಇದಕ್ಕೆ ಪ್ರತಿಫಲವಾಗಿ ಶ್ರೀನಿವಾಸ ರಾಯರು ಗಂಗಿಯ ದೇಹ ಸಂಪರ್ಕ ಬಯಸಿದರು. ಇದಕ್ಕೆ ಗಂಗಿ ನಿರಾಕರಿಸಲಿಲ್ಲ. ಇಬ್ಬರು ತೋಟದ ಬಾವಿಯ ಹಿಂದೆ ಸಂಧಿಸುತ್ತಿದ್ದರು. ಇದರ ಪರಿಣಾಮ ಗಂಗಿ ಯ ಹೊಟ್ಟೆಯಲ್ಲಿ ಇನ್ನೊಂದು ಜೀವ ಮೊಳಕೆಯೊಡೆಯಿತು.  ಈ ವಿಷಯವನ್ನು ಗಂಗಿ ಶ್ರೀನಿವಾಸರಲ್ಲಿ ಹೇಳಿಕೊಂಡಳು. ರಾಯರು  ಏನೋ ಹಾರಿಕೆ ಉತ್ತರ ಕೊಟ್ಟರು. ರಾಯರಿಗೆ ತಿಳಿದಿತ್ತು ಗಂಗಿ ಮತ್ತು ತನ್ನ ಮದುವೆ ಅಸಾದ್ಯವೆಂದು. ಇದಾದ ಕೆಲವೆ ದಿನದಲ್ಲಿ ಗಂಗಿಯ ತಾಯಿ ತೀರಿಕೊಂಡಳು. ಗಂಗಿ ಮತ್ತು ಶ್ರೀನಿವಾಸರು ಬೇಟಿ ಆಗಲು ಆಗಲಿಲ್ಲ. ಅಷ್ಟರಲ್ಲೆ ಗಂಗಿ ಮತ್ತು ಶ್ರೀನಿವಾಸರ ವಿಷಯ ಹೊಗೆಯಾಡಲು ಶುರುವಾಯಿತು. ಇದು ಶ್ರೀನಿವಾಸರ ತಂದೆ-ತಾಯಿಯವರೆಗೂ ಬಂತು. ತಮ್ಮ ಮನೆಗೆ ತಾವೆ ಬೇಲಿ ಕಟ್ಟಿಕೊಳ್ಳುವುದೆ ಲೇಸು ಎಂದು ಶ್ರೀನಿವಾಸರಿಗೆ ಮದುವೆ ಮಾಡಲು ಯೋಚಿಸಿದರು.  ಅನುಕೂಲಸ್ಥರ ಮನೆ ಒಂದೇ ಮಗ.  ಹೆಣ್ ಹೆತ್ತವರು ಜೇನು ಮುತ್ತಿದಂತೆ ತಮ್ಮ ಮಕ್ಕಳ ಜಾತಕದ ಜೊತೆ ಬಂದರು. ಹದಿನೈದು ದಿನಕ್ಕೆ ಐವತ್ತು ಜಾತಕ ಬಂದಿತು. ಹೊನ್ನಳ್ಳಿಯ ಜೋಯಿಸರ ಮಗಳು ಸಾವಿತ್ರಿ ಎಂಬ ಹುಡುಗಿ ಜಾತಕ ಕೂಡಿ ಬಂತು. ಹೆಣ್ಣು ನೋಡುವ ಶಾಸ್ತ್ರವು ಆಯಿತು. ಸಾವಿತ್ರಿ ಬೆಳ್ಳಗೆ ಗುಂಡು-ಗುಂಡಾಗಿ ಲಕ್ಷಣವಾಗಿದ್ದಳು. ಒಳ್ಳೆ ಮನೆತನ ಜಾತಕವು ಚನ್ನಾಗಿ ಕೂಡಿ ಬಂದ ಕಾರಣ ಶ್ರೀನಿವಾಸ ರಾಯರ ಮತ್ತು ಸಾವಿತ್ರಮ್ಮನವರ ವಿವಾಹ ಕಣ್ಣು ಮುಚ್ಚಿ ಒಡೆಯುವುದರೊಳಗೆ ಮುಗಿದೆ ಹೋಯಿತು. ಮುತ್ತಿನಂತ ಹೆಂಡತಿ, ಮಕ್ಕಳು ಎಂದು ತಮ್ಮ ಸಂಸಾರದಲ್ಲಿ ಮುಳುಗಿ ಹೋದರು.
ಶ್ರೀನಿವಾಸ ರಾಯರು ಬಾವಿ ಕಟ್ಟೆ ಮೇಲೆ ಕುಳಿತು ತಮ್ಮ ಗತಕಾಲದ ಬಗ್ಗೆ ಮೆಲುಕು ಹಾಕಿದರು. ಗಂಗಿ ಮತ್ತು ತಮ್ಮ ಸಂಭಂದದ ಬಗ್ಗೆ ಯೋಚಿಸುತ್ತ ತನ್ನಿಂದ ಅವಳಿಗೆ ಆದ ಅನ್ಯಾಯ ಮತ್ತು ಅವಳ ಬಗ್ಗೆ ಒಮ್ಮೆಯು ತಿರುಗಿ ನೋಡದೆ ಇರೋ ದನ್ನು ಯೋಚಿಸಿ ಮರುಕ ಪಟ್ಟರು. ಅವಳು ತನ್ನ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬಗ್ಗೆ ಹೇಳಿದ್ದು ನೆನಪಾಗಿ ಆ ಮಗುವಿನ ಬಗ್ಗೆ ಕನಿಕರ ಹುಟ್ಟಿತು. ಗಂಗಿ ಗೆ ತಾಳಿ ಕಟ್ಟದಿದ್ದರು ಆ ಮಗು ತನ್ನದೆ ಎಂದು ಹೇಗಾದರು ಅವರ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ಯೋಚಿಸಿದರು. ತಾನು ಆಗ ಮಾಡಿದ ತಪ್ಪಿಗೆ ಈಗಲಾದರು ಸಹಾಯ ಮಾಡಬೇಕು ಎಂದು ಯೋಚಿಸಿದರು. ಎನಿಲ್ಲವೆಂದರು ಗಂಗಿ ಮತ್ತು ಮಗುವಿಗೆ ಹಣಕಾಸಿನ ಸಹಾಯ ಮಾಡಬೇಕು ಎಂದು ತಿರ್ಮಾನ ಮಾಡಿದರು.
ರಾಯರು ಯೋಚನೆಯಲ್ಲಿ ಕತ್ತಲು ಆವರಿಸಿತ್ತು. ಬೆಸರದಲ್ಲಿಯೇ ಮನೆ ಕಡೆ ಹೆಜ್ಜೆ ಹಾಕಿದರು. ಮನೆಗೆ ಬಂದ ರಾಯರಿಗೆ ಊಟ ಬೇಡವಾಗಿತ್ತು. ಇವರ ಸಪ್ಪೆ ಮುಖ ನೋಡಿ ಸಾವಿತ್ರಮ್ಮ ಏನಾಯಿತು? ಎಂದು ಕೇಳಿದರು. ರಾಯರು ಏನೋ ಹಾರಿಕೆ ಉತ್ತರ ಕೊಟ್ಟು ತಮ್ಮ ಪಾಡಿಗೆ ಹೋಗಿ ಮಲಗಿದರು.
ಮರುದಿನ ರಾಯರು ಸ್ವಲ್ಪ ಬೇಗ ಎದ್ದು ತಮ್ಮ ನಿತ್ಯ ಕರ್ಮವನ್ನು ಮುಗಿಸಿ ತೋಟದ ಇನ್ನೊಂದು ದಿಂಬಕ್ಕೆ ಹೊರಟರು. ಅಲ್ಲಿ ಗಂಗಿಯ ತವರು ಮನೆ ಸಂಭಂದಿಗಳು ಮಣ್ಣಿನ ಕೆಲಸ ಮಾಡುತ್ತಿದ್ದರು. ರಾಯರು ಗಂಗಿಯ ಚಿಕ್ಕಪ್ಪನ ಮಗನ ಹತ್ತಿರ ಉಪಾಯವಾಗಿ ಸುತ್ತಿ ಬಳಸಿ ಅವರ ಮನೆಯ ವಿಷಯ ಮಾತಾಡಲು ಶುರು ಮಾಡಿದರು. ಮಾತಿನ ಮದ್ಯೆ ಕೆಲಸಕ್ಕೆ ಜನ ಸಾಕಾಗುವುದಿಲ್ಲ ಎಂದಾಗ  ನಿಮ್ಮ ಮನೆ ಹೆಣ್ಣುಮಕ್ಕಳನ್ನು ಬೇರೆ ಊರಿಂದ ಕರೆ ತನ್ನಿ ಇದರಿಂದ ಅವರಿಗೂ ಕೆಲಸ ಸಿಕ್ಕಿದ ಹಾಗೆ ಆಗುತ್ತದೆ ಎಂದು ಕೇಳಿದರು. ಆಗ ಆ ಆಳು ತಮ್ಮ ಮನೆಯ ಹಳೆ ಪುರಾಣ ಹೇಳುತ್ತ ಹೇಗೋ ಗಂಗಿಯ ವಿಷಯ ಹೇಳಿದ. ಅದನ್ನು ಕೇಳಿ ರಾಯರು ನಿಂತಲ್ಲೆ ನಡುಗಿದರು. ಆ ಆಳು ಈಗಿನ ಕಾಲದವನು ಮತ್ತು ಹಳೆ ಕಥೆ ಆಗಲಿ, ಇವರಿಬ್ಬರ ಸಂಭಂದದ ಬಗ್ಗೆ ಆಗಲಿ ತಿಳಿದಿಲ್ಲದ ಕಾರಣ ಅವನು ಸಹಜವಾಗಿ ಹೇಳಿದ,” ನಮ್ಮ ಗಂಗಿಯತ್ತಿಗೆ ಯಾರೋ ಮದುವೆ ಆಗದೆ ಬಸುರಿ ಮಾಡಿ ಕೈ ಕೊಟ್ಟರು. ಯಾರ್ ಎಷ್ಟು ಹೇಳಿದ್ರು ಹೊಟ್ಟೆ ಕರಗಿಸದೆ ಹೆಣ್ಣು ಮಗುವಿಗೆ ಜನ್ಮ ಕೊಟ್ಳು. ಬೇರೆ ಯಾರನ್ನು ಮದುವೆ ಆಗ್ದೆ ನಮ್ ಅತ್ತಿ ಅವ್ರ ನೆನ್ಪಲ್ಲೆ ಇದ್ರಂತೆ. . ನನ್ಗೆ ಜಾಸ್ತಿ ಏನ ಗೊತ್ತಿಲ್ಲ. ಒಟ್ಟನಲ್ಲಿ ಮೋಸ ಹೋದ್ ತಪ್ಪಿಗೆ ಸುಮಾರು ವರ್ಷದ ಹಿಂದೆ ಮಗಿನ್ ಜೊತೆ ಅತ್ತಿ ಕೂಡ ಹೊಳೆ ಹಾರಿ ಜೀವ ಬಿಟ್ಳಂತೆ” ಎಂದನು.
ರಾಯರಿಗೆ ಇದನ್ನು ಕೇಳಿದ್ದೆ ಶಾಕ್ ಆಯಿತು.  ಹೇಗೊ ಅಲ್ಲಿಂದ ಬಂದು ಬಾವಿ ಕಟ್ಟೆ ಮೇಲೆ ಕುಳಿತು ಬಿಕ್ಕಿ ಬಿಕ್ಕಿ ಅತ್ತರು. ತಾನ್ ಮಾಡಿದ ತಪ್ಪಿಗೆ ಎರಡು ಜೀವ ಹೋಗಿದ್ದು ನೆನೆದು ತಲೆ ಜಜ್ಜಿಕೊಂಡು ಅತ್ತರು. ಪುಟ್ಟ ಹೆಣ್ಣು ಮಗು ಅವರ ಕಣ್ಣು ಮುಂದೆ ಬಂತು. ಅದರ ಕಿಲ-ಕಿಲ ನಗು ಕೇಳಿಸಿದ ಹಾಗಾಯಿತು. ಅಲ್ಲಿ ಕುಳಿತುಕೊಳ್ಳಲು ಸಾದ್ಯವಾಗದೆ ಸರಸರನೆ ಮನೆಗೆ ಬಂದರು. ಬಂದವರೆ ಬಚ್ಚಲ ಮನೆಗೆ ಹೋಗಿ ಸ್ನಾನ ಮಾಡಿದರು. ಇವರ  ವರ್ತನೆ ಸಾವಿತ್ರಮ್ಮನಿಗೆ  ವಿಚಿತ್ರವೆನಿಸಿತು. ಕೆಲವೊಮ್ಮೆ ಹಸು ಸತ್ತಿದ್ದನ್ನು ನೋಡಿದರು ಹೀಗೆ ಮಾಡುತ್ತುದ್ದರು. ಆದರೆ ಇಂದು ಮಂಕಾಗಿ ತಮ್ಮ ಕೋಣೆಯಲ್ಲಿ ಕುಳಿತರು. ಸಾವಿತ್ರಮ್ಮ  ಮಾಳಿಗೆಯ ಮೇಲೆ ಇದ್ದ ಮಗನನ್ನು ಕರೆದು ಹೇಳಿದರು. ಮಗ ಇದಕ್ಕೆ ಜಾಸ್ತಿ ತಲೆಕೆಡಿಸಿಕೊಳ್ಳದೆ “ ಯಾವುದೋ ವಿಷಯಕ್ಕೆ ಬೆಸರ ಆಗಿರ ಬೇಕು. ಒಂದೆರಡು ದಿನ ಸುಮ್ಮನಿರು ತಾವಾಗೆ ಸರಿ ಹೋಗ್ತಾರೆ.” ಎಂದನು. ಆದರೆ ಇದು ಒಂದೆರಡು ದಿನಕ್ಕೆ ಸರಿ ಹೋಗದೆ ರಾಯರ ಮನಸ್ಥಿತಿ ದಿನ ದಿನಕ್ಕು ಹದಗೆಡುತ್ತಿತ್ತು. ಯಾವುದರಲ್ಲು ಆಸಕ್ತಿ ಇಲ್ಲ. ಅವರಷ್ಟಕ್ಕೆ ಅವರು ಅಳುತ್ತಿದ್ದರು. ಮಾತಿಗೊಮ್ಮೆ ತಾನು ತಪ್ಪು ಮಾಡಿದೆ ಎಂದು ಹೇಳುತ್ತಿದ್ದರು. ಆದರೆ ಗಂಗಿ ಮತ್ತು ಮಗುವಿನ ವಿಷಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ರಾಯರು ಬಾಯಿ ಬಿಡಲಿಲ್ಲ.  ಊರಿನ ಕೆಲವು ಹಿರಿ ತಲೆಗಳಿಗೆ ತಿಳಿದಿದ್ದರು ಯಾರಿಗೂ ಈ ವಿಷಯ ನೆನಪೆ ಇಲ್ಲ, ಅದು ಯವಾಗಲೊ ಮುಗಿದ ಅದ್ಯಾಯವಾಗಿತ್ತು. ಅದು ಅಲ್ಲದೆ ಊರಲ್ಲಿ ಈ ತರ ಘಟನೆಗಳು ತುಂಬಾ ಆಗಿದ್ದವು.
ರಾಯರ ವರ್ತನೆ ಹೆಂಡತಿ ಮತ್ತು ಮಗನಿಗೆ ದೊಡ್ಡ ಸಮಸ್ಯೆ ಆಯಿತು. ಮಗ ತನ್ನ ಮದುವೆ ವಿಚಾರ ಅಪ್ಪ ಮನಸ್ಸಿಗೆ ಹಚ್ಚಿಕೊಂಡಿರ ಬೇಕು ಎಂದು ಅಪ್ಪನನು ಸಮಾಧಾನ ಪಡಿಸಿದ. “ಅಪ್ಪ ಜೀವನದಲ್ಲಿ ಮದುವೆನೆ ಮುಖ್ಯ ಅಲ್ಲ. ನಮಗೆ ಹೊಂದಿಕೆ ಆಗದೆ ಇರೋ ರನ್ನು ತಂದು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವದಕ್ಕಿಂತ ನಾನು ನನ್ನ ಕೃಷಿ ಕೆಲಸದಲ್ಲಿ ನೆಮ್ಮದಿ ಆಗಿದ್ದೆನೆ. ಅದು ಅಲ್ಲದೆ ಅಕ್ಕಂದಿರ ಮಕ್ಕಳು ನಮ್ಮನೆ ಮೊಮ್ಮಕ್ಕಳೆ ಅಲ್ವಾ…ಅವರು ನಮ್ಮನೆ ಗೆ ಸಂಭಂದ ಪಟ್ಟವರಲ್ಲವಾ..” ಎಂದು ಹೇಳಿದ್ದೆ ರಾಯರು ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡಿದರು.  ರಾಯರಿಗೆ ಮಗ “ಅಕ್ಕಂದಿರ ಮಕ್ಕಳು ಹೇಳಿದ್ದು”  ರಾಯರಿಗೆ ಗಂಗಿ ಯ ಜೊತೆ ಸತ್ತ ಮಗುವಿನ ನೆನಪಾಯಿತು. ಮಗನಿಗೆ ತಾನು ಹೇಳಿದ್ದು ತಪ್ಪಾಯಿತೆನೋ ಎಂದು ಅಪ್ಪನಿಗೆ ಸಮಾಧಾನ ಮಾಡಿ ಮಲಗಿ ಎಂದು ರೂಮಿನಿಂದ ಹೋದನು. ರಾಯರಿಗೆ ನಿದ್ದೆ ಬರೋದ್ ಹಾಗಿರಲಿ,ಮಗ ಮದುವೆ ನೆ ಮುಖ್ಯ ಅಲ್ಲ ಹೇಳಿ ಅಂದದ್ದು ಕರುಳು ಹಿಂಡಿದಂತಾಯಿತು. ತಾನಿ ಅವನಿಗಿಂತ ಚಿಕ್ಕ ವಯಸ್ಸಿನಲ್ಲೆ ಬೇರೆ ಹೆಣ್ಣಿನ ಸಹವಾಸ ಮಾಡಿ ಅವಳ ಜೀವನ ಹಾಳು ಮಾಡಿದೆ. ಆದರೆ ಮಗ ನಿಯತ್ತಿನಲ್ಲಿ ಇರೋದನ್ನು ನೋಡಿ ತಮ್ಮ ಮೇಲೆ ಮತ್ತು ಅಸಹ್ಯ ವೆನಿಸಿ ಬಚ್ಚಲ ಮನೆಗೆ ಹೋಗಿ ಸ್ನಾನ ಮಾಡಿದರು. ನಡು ಮನೆಯಲ್ಲಿ ಇರೋ ಸಾವಿತ್ರಮ್ಮ ಮತ್ತು ಮಗನಿಗೆ ದಿಗಿಲಾಯಿತು. ಅದು ಅಲ್ಲದೆ ಊರಲ್ಲಿ ಕೆಲವರು ಮಗನ ಮದುವೆ ಅಗದ ಕಾರಣ ರಾಯರು ಮಂಕಾಗಿದ್ದಾರೆ ಎಂದು ಹೊಗೆಯಾಡಲು ಶುರುವಾಯಿತು. ಸುಬ್ರಮಣ್ಯ ಎನು ಮಾಡಲು ತೋಚದೆ ಅಕ್ಕ-ಭಾವಂದಿರಿಗೆ ಹೇಳಿ ಕಳಿಸಿದ.
ರಾಯರ ಆರೋಗ್ಯ ವಿಚಾರಿಸಲು ಹೆಣ್ಣುಮಕ್ಕಳು ಅಳಿಯಂದಿರು ಮತ್ತು ಮೊಮ್ಮಕ್ಕಳು ಬಂದರು. ಯಾವಾಗಲು ಲವಲವಿಕೆಯಿಂದ ಓಡಾಡುತ್ತಿರೋ ಅಪ್ಪ ಕೋಣೆಯಲ್ಲಿ ಮಂಕಾಗಿರೋದನ್ನು ನೋಡಿ ಆಶ್ಚರ್ಯವಾಯಿತು. ರಾಯರು ತನ್ನ ಮಕ್ಕಳು.ಮೊಮ್ಮಕ್ಕಳನ್ನು ನೋಡಿದ್ದೆ ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡಿದರು. ಯಾಕ್ ಅಪ್ಪ ಏನಾಯ್ತು? ಅಂತ ಕೇಳಿದ್ರೆ, “ನಿಮ್ಮನ್ನೆಲ್ಲ  ಆ ದೇವರು ಗಂಡ ಮಕ್ಕಳ ಜೊತೆ ಚನ್ನಾಗಿ ಇಟ್ಟಿದ್ದಾನೆ. ಆದ್ರೆ ನಾ ಮಾಡಿದ್ ಪಾಪಕ್ಕೆ…” ಅಂತ ಅಳ್ತಾ ಮಂಕಾಗಿ ಕೂತರು. ಸಾವಿತ್ರಮ್ಮ ಕಣ್ಣಿರು ಹಾಕ್ತಾ ಅಡಿಗೆ ಮಗೆ ಕಡೆ ಹೋದರು. ಸುಬ್ರಮಣ್ಯ ತನ್ನ ಮದುವೆ ವಿಷಯಕ್ಕೆ ಎಂದು ಜಗುಲಿಯ ಕಡೆ ಹೋದನು. ಆದರೆ  ಅವರ ಮನ್ಸಸ್ಸಿನಲ್ಲಿ ಗಂಗಿ ಮತ್ತು ಆ ಹೆಣ್ಣು ಮಗು ನದಿಗೆ ಹಾರಿ ಪ್ರಾಣ ಬಿಟ್ಟಿದ್ದು ಇತ್ತು. ಅದು ಅಲ್ಲದೆ ಇವರನ್ನೆಲ್ಲ  ನೋಡಿ ಗಂಗಿ ಮಗಳು ಇದ್ದರೆ ಇವಳಷ್ಟೆ ದೊಡ್ಡದಾಗಿ ಇರ್ತಿದ್ದಳು. ತಾನು ಮಾಡಿದ ತಪ್ಪಿಗೆ ಆ ಎರಡು ಹೆಣ್ಣು ಜೀವ ಬಲಿ ಆಯಿಯು ಎಂದು ಒಳ-ಒಳಗೆ ಸಂಕಟ ಪಡ್ತಾ ಇದ್ದರು. ಹೆಣ್ಣು-ಮಕ್ಕಳು ಹೇಗೋ ಅಪ್ಪನನ್ನು ಸಮಾಧಾನ ಮಾಡಿದರು. ಸುಬ್ರಮಣ್ಯನಿಗೂ ಕಂಕಣ ಕೂಡಿ ಬರತ್ತೆ, ನೋಡ್ತ ಇರಿ ಅಪ್ಪ ನೀವು ಮತ್ತು ಅಮ್ಮ ಯಾರಿಗೂ ಅನ್ಯಾಯ ಮಾಡಿಲ್ಲ. ದೇವರು ಅವನಿಗೆ ಒಳ್ಳೆ ಹೆಂಡತಿ, ಮಕ್ಕಳನ್ನು ಕೊಡ್ತಾನೆ ಅಂದರು. ಅನ್ಯಾಯ ಅನ್ನೋ ಶಬ್ದ ಕೇಳಿದ್ದೆ ಕೇಳಿದ್ದು ರಾಯರ ಕಣ್ಣಲ್ಲಿ ಗಳ-ಗಳನೆ ಕಣ್ಣೀರು ಸುರಿಯಿತು. ಯಾರಿಗೂ ಮುಂದೆನು  ಮಾತಾಡಲು ತೋಚದೆ ಅಪ್ಪನನ್ನು ಮಲಗಿಸಿ ಎಲ್ಲರೂ ಕೋಣೆಯಿಂದ ಆಚೆ ಬಂದರು.
ರಾಯರ ಪರಿಸ್ಥಿತಿ ನೋಡಿ ಎಲ್ಲರಿಗೂ ಆತಂಕವಾಯಿತು. ರಾಯರ  ಒಬ್ಬ ಅಳಿಯ ಸುಬ್ರಮಣ್ಯನ ಹತ್ತಿರ ಸೂಕ್ಷ್ಮವಾಗಿ ಇವರನ್ನು ಯಾವುದಾದರು ಮಾನಸಿಕ ಡಾಕ್ಟರ್ ಬಳಿ ತೋರಿಸುವುದು ಉತ್ತಮ. ಮನಸ್ಸಿನಲ್ಲಿ ಏನೋ ಕೊರಿತಾ ಇದೆ. ಅವರಿಗೆ ಮುಕ್ತವಾಗಿ ಯಾರ ಹತ್ತಿರನೂ ಹೇಳಿಕೊಳ್ಳಲು ಆಗುತ್ತಿಲ್ಲ. ಪರಿಸ್ಥಿತಿ ಕೈ ಮೀರುವುದರೊಳಗೆ ಸಿಟಿಗೆ ಹೋಗಿ ತೋರಿಸಿದರಾಯಿತು. ಯಾರಲ್ಲು ಈ ವಿಷಯ ಮಾತಾಡೋದು ಬೇಡ. ಮನೆಯಲ್ಲು ಯಾರಿಗೂ ಹೇಳೋದು ಬೇಡ. ನಾವೆ  ಅವರನ್ನು ಸಿಟಿ ಡಾಕ್ಟರ್ ಹತ್ತಿರ್ ತೋರಿಸಿಕೊಂಡು ಬರುವುದಾಗಿ ಹೇಳಿದರಾಯಿತು ಅಂದ. ಇದಕ್ಕೆ ಸುಬ್ರಮಣ್ಯನು ಒಪ್ಪಿದ.
ಭಾವನ ಮಾತಿನ ಹಾಗೆ ಯಾರಿಗೂ ಯಾವ ವಿಷಯ ಹೇಳದೆ ಸಿಟಿ ಡಾಕ್ಟರಿಗೆ ಅಪ್ಪನನ್ನು ತೋರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಅಪ್ಪ,ಮಗ, ಮತ್ತು ಎರಡು ಭಾವಂದಿರು ಹೋದರು.
ಇತ್ತ ಅಕ್ಕಂದಿರು ಕೈ ಕಟ್ಟಿ ಕೂರಲಿಲ್ಲ. ಅವರ ಬಳಗದಲ್ಲೆ  ಸ್ವಲ್ಪ ಬಡತನದಲ್ಲಿ ಇದ್ದ ಒಂದು ಹೆಣ್ಣನ್ನು ಹುಡಿಕಿದರು. ವಿದ್ಯೆ ,ರೂಪದಲ್ಲಿ ಸುಬ್ರಮಣ್ಯನಿಗೆ ತಕ್ಕನಾಗಿದ್ದಳು. ಅಂತಸ್ತಿನ ಅಹಃ ಕರಗಿ ಹೋದ ಕಾರಣ ತಾವೆ ದುಡ್ಡು ಕೊಟ್ಟು ಮದುವೆ ಮಾಡಿಕೊಳ್ಳುವುದಾಗಿ ಮಾತಾಡಿದ್ದರು. ಸುಬ್ರಮಣ್ಯನು ಈ ಮದುವೆಗೆ ಒಪ್ಪುತಾನೆಂದು ಅವನು ಬಂದ ಮೇಲೆ ಮುಂದಿನ ಮಾತು ಕಥೆ ಎಂದು ತಿರ್ಮಾನ ಮಾಡಿದರು.
ಅತ್ತ ಸಿಟಿಗೆ ಹೋದ ರಾಯರು ಮನೆಗೆ ವಾಪಸ್ ಬಂದರು. ಸ್ವಲ್ಪ ಮಟ್ಟಿಗೆ ಸುಧಾರಿಸಿದರು ಮಂಕಾಗಿಯೆ ಇರುತ್ತಿದ್ದರು. ಆದರು ವೈದ್ಯರಲ್ಲಿ ಮನಸ್ಸು ಬಿಚ್ಚಿ ಎಲ್ಲ ಹೊರ ಹಾಕಿದ ಮೇಲೆ ಸ್ವಲ್ಪ ಮನಸ್ಸು ಹಗುರವಾಯಿತು. ಅದಕ್ಕೂ ಹೊರತಾಗಿ ಮಗನ ಸಮಾಧನ ದೊರಕಿತು. ಈ ಸತ್ಯ ಮನೆಯಲ್ಲಿ ಯಾರಿಗು ತಿಳಿಯದೆ ಈ ಮೂವರಲ್ಲೆ ಇತ್ತು.
ಇತ್ತ ಅಕ್ಕಂದಿರು ನೋಡಿದ ಹುಡುಗಿ ಸುಬ್ರಮಣ್ಯನಿಗೂ ಒಪ್ಪಿಗೆ ಆಯಿತು. ಮೊದಲೆ ಮಾತು ಕೊಟ್ಟಂತೆ ಹೆಣ್ಣಿನ ಮನೆಯವರಿಗೆ ಹಣಕಾಸಿನ ಸಹಾಯ ಮಾಡಿದರು.ಮದುವೆಯನ್ನು ಇವರ ಮನೆ ಮುಂದೆ ಚನ್ನಾಗಿ ಮದುವೆ ಆಯಿತು. ಸಾವಿತ್ರಮ್ಮನಿಗೆ  ಮಗ ಸಂಸಾರಸ್ಥನಾಗಿ ಮನೆಗೆ ಸೊಸೆ ಬಂದ ಸಡಗರ. ಅಕ್ಕಂದಿರಿಗೂ ಏನೋ ಸಮಾಧಾನ.  ರಾಯರು ಮಾತ್ರ ಹೇಳಿದ್ದಕ್ಕೆ ಉತ್ತರ ಕೊಟ್ಟು ತಮ್ಮ ಪಾಡಿಗೆ ತಾವಿದ್ದರು. ಎಷ್ಟೆ ಔಷದಿ ಬರಲಿ, ಸಮಾಧಾನ ಮಾತಾಗಲಿ ತಾವು ಮಾಡಿದ ತಪ್ಪು ಒಳ-ಒಳಗೆ ಚುಚ್ಚುವುದು.ಬಿಸಿ ರಕ್ತದಲ್ಲಿ ಎನು ಅನ್ನಿಸದೆ ಇದ್ದರು  ವಯಸ್ಸಾದ ಮೇಲೆ ಒಳ-ಒಳಗೆ ನಮ್ಮನ್ನು ತಿಂದೆ ತಿನ್ನುವುದು.