Wednesday, November 13, 2019

ಕುಂಕ್ರಿಯ ಸ್ವಚ್ಚ ಭಾರತ


                       ಕುಂಕ್ರಿಯ ಸ್ವಚ್ಚ ಭಾರತ
ದೀಪಾವಳಿ ಬಂತು ಅಂದರೆ ಏನೋ ಒಂದು ಸಡಗರ. ಅದರಲ್ಲು ಮಕ್ಕಳಲ್ಲಿ ಮೊದಲಿಗೆ ಎಷ್ಟು ದಿನ ಶಾಲೆಗೆ ರಜೆ ಎಂದು ಡೈರಿ ನೋಡಿರುತ್ತಾರೆ. ನಂತರ ಈ ಬಾರಿ ಯಾವ ಯಾವ ಪಟಾಕಿ ತರಬೇಕು ಅನ್ನುವ ಪ್ಲಾನ್. ಈ ಪಟಾಕಿ ಮಾತ್ರ ಅಪ್ಪಂದಿರ ಜೇಬಿಗೆ ಖನ್ನ. ಪಟಾಕಿ ಹೊಡೆಯುವಾಗಲು ಕೈ ಸುಟ್ಟುಕೊಳ್ಳುವ ಹಾಗೆ ಪಟಾಕಿ ತರಬೇಕಿದ್ದರು ಕೈ ಬಿಸಿ ಆಗುವುದು. ಆದರೆ ಏನ್ ಮಾಡೋದು ಪಕ್ಕದ ಮನೆ ಮಗು ಪಟಾಕಿ ಹೊಡೆಯಬೇಕಿದ್ದರೆ ನಮ್ಮನೆ ಮಕ್ಕಳು ಮನೆ ಒಳಗೆ ಕುತಿರಲ್ಲ. ಅವರು ಒಂದು ಪ್ಯಾಕ್ ರಾಕೆಟ್ ಹೊಡೆದರೆ ಇವರು ಒಂದು ಪ್ಯಾಕ್ ರಾಕೆಟ್ ತರುವುದೆ. ಹೆಣ್ಣು ಮಕ್ಕಳಿಗೆ ನೆಲ ಚಕ್ರ ಮತ್ತು ಪವರ್ ಪಾಟ್ ಮೇಲೆ ವಿಶೇಷ ಆಸಕ್ತಿ.ಅವರವರ ಆಸಕ್ತಿಯ ಅನುಸಾರ ಪಟಾಕಿಯ ಖರೀದಿ ಆಗುವುದು.
ಏನೇ ಅಂದರು ದೀಪಾವಳಿಗೆ  ಎರಡು-ಮೂರು ದಿನ ಶಾಲೆಗೆ  ರಜೆ ಗ್ಯಾರಂಟಿ. ಅದರ ಅನುಸಾರವಾಗಿ ಮೂರು ದಿನಕ್ಕೆ ಆಗುವಷ್ಟು ಪಟಾಕಿ ಕುಂಕ್ರಿಯ ಮನೆಗು ಬಂತು. ಹಾಗೆ ಪ್ಲಾಟ್ ನಲ್ಲಿ ಇರುವ ಅಕ್ಕ-ಪಕ್ಕ ದ ಮನೆಗು ಪಟಾಕಿಯ ಆಗಮನವಾಯಿತು. ಮೊದಲೆ ಮಕ್ಕಳಲ್ಲಿ ಮಾತು-ಕಥೆ ಆಗಿತ್ತು. ಎಲ್ಲಾ ಸೇರಿ ಸುಮಾರು ಏಳು ಗಂಟೆಯಿಂದ ಪಟಾಕಿ ಹೊಡೆಯಲು ಶುರು ಮಾಡುವುದೆಂದು. ಮಕ್ಕಳ ಖುಶಿ ಜೊತೆ ನಮ್ಮ ಖುಶಿಗು ಎಲ್ಲಾ ಸೇರಿ ದೀಪ ಹಚ್ಚಿ ಪಟಾಕಿ ಹೊಡೆಯಲು ಶುರು ಮಾಡಿದೆವು. ಕುಂಕ್ರಿ ಗೆ ಮತ್ತು ಅವಳ ಸ್ನೇಹಿತರಿಗೆ  ಪಟಾಕಿ ಹೊಡೆಯುವ ಉತ್ಸಾಹ. ಅಂತು ಮೊದಲನೆ ದಿನದ ಪಟಾಕಿ ಹೊಡೆದಾಯಿತು.
ಪಟಾಕಿ ಹೊಡೆದ ತಕ್ಷಣ ನಮಗೆಲ್ಲಾ ಟಿ.ವಿ ಯಲ್ಲಿ ಪ್ರಸಾರ ಆಗುವ ನಮ್ಮ ಮೆಚ್ಚಿನ ಕಾರ್ಯಕ್ರಮಗಳು ನೆನಪಾದವು. ಮನೆಗೆ ಹೋಗುವ  ಅವಸರದಲ್ಲಿ ಎಲ್ಲಾ ಬೆಸ್ಮೆನ್ಟಗೆ ಬಂದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ಪುನಃ ರಸ್ತೆಗೆ ಕರೆದುಕೊಂಡು ಬಂದರು. ನಾವು ಇನ್ನೇನೋ ಪಟಾಕಿ ಹೊಡೆಯುವುದಿದೆ ಎಂದು, “ನೋಡಿ ಇವತ್ತಿಗೆ ಸಾಕು. ಇನ್ನು ಎರಡು ದಿನ ಇದೆ. ನಾಳೆ ನಾಡಿದ್ದು ಹೊಡೆದರಾಯಿತು. ಲೇಟ್ ಆಯಿತು ಮನೆಗೆ ಹೋಗೋಣ” ಎಂದು ಹೇಳಿದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ನಾವು ಪಟಾಕಿ ಹೊಡೆಯಲು ಕರೆದಿಲ್ಲ. ಇವತ್ತಿಗೆ ಇಷ್ಟೆ ಸಾಕು. ಆದ್ರೆ ಇವತ್ತು ಹೊಡೆದ ಪಟಾಕಿ ಕಸ ಎಲ್ಲರು ಸೇರಿ ಕ್ನೀನ್ ಮಾಡೋಣ. ಹಾಗೆ ನಾಳೆ ನಾಡಿದ್ದು ಕೂಡ. ಟಿ.ವಿ ನಲ್ಲಿ ನರೇಂದ್ರ ಮೋದಿ ಭಾಷಣ ಕೇಳಿ ಚಪ್ಪಾಳೆ ಹಾಕ್ತೀರಾ. ಆದ್ರೆ ಅವರು ಹೇಳೊದು ನಾವು ಮಾಡೋದು ಬೇಡ್ವಾ? ಬನ್ನಿ ನಾವು ಮಾಡಿದ ಕಸನ ನಾವೆ ಕ್ಲೀನ್ ಮಾಡೋಣ ಅನ್ನುತ್ತಾ ಎಲ್ಲರ ಕೈಗು ಪೊರಕೆ ಕೊಟ್ಟರು. ನಮಗು ಮಕ್ಕಳು ಕೇಳಿದ್ದು ಸರಿ ಅನ್ನಿಸಿ ದೀಪಾವಳಿ ಆಚರಣೆಯ ಜೊತೆಗೆ ಮಕ್ಕಳ ಜೊತೆ ಸ್ವಚ್ಚ ಭಾರತದ ನಿಯಮವನ್ನು ಪಾಲಿಸಿದೆವು.


No comments: